ಅಧಿಕೃತ ಬಂಗಲೆ ತೆರವಿಗೆ ಎಸ್ಟೇಟ್ ಇಲಾಖೆ ಆದೇಶ: ಮೆಹಬೂಬಾ ಮುಫ್ತಿ

Prasthutha|

ಜಮ್ಮು: ಶ್ರೀನಗರದಲ್ಲಿರುವ ತನ್ನ ಅಧಿಕೃತ ಫೇರ್’ವ್ಯೂ ಬಂಗಲೆಯನ್ನು ತೆರವುಗೊಳಿಸುವಂತೆ ಎಸ್ಟೇಟ್ ಇಲಾಖೆ ಆದೇಶ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

- Advertisement -

ಈ ಬಂಗಲೆಯನ್ನು ಮೆಹಬೂಬಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರಿಗೆ 2005ರಲ್ಲಿ ಮಂಜೂರು ಮಾಡಲಾಗಿತ್ತು.

ಫೇರ್’ವ್ಯೂ ಬಂಗಲೆಯಿಂದ ಹೊರಹಾಕುವ ಸೂಚನೆಯನ್ನು ಕೆಲವು ದಿನಗಳ ಹಿಂದೆ ನನಗೆ ನೀಡಲಾಗಿತ್ತು. ಇದರಲ್ಲಿ ಆಶ್ಚರ್ಯವೇನಿಲ್ಲ ಮತ್ತು ನಿರೀಕ್ಷಿತ ಬೆಳವಣಿಗೆಯಾಗಿದೆ ಎಂದು ಮುಫ್ತಿ ಮೆಹಬೂಬ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Join Whatsapp