ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ: ಹಸು ತಿಂದ ಹುಲಿ, ಆತಂಕದಲ್ಲಿ ಗ್ರಾಮಸ್ಥರು

Prasthutha|

ಮಡಿಕೇರಿ:  ಗಬ್ಬದ ಹಸುವನ್ನು ಹುಲಿಯೊಂದು  ಕೊಂದು ತಿಂದ ಘಟನೆ ವಿರಾಜಪೇಟೆ ತಾಲ್ಲೂಕಿನ ತಿತಿಮತಿ ಬಳಿಯ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ.

- Advertisement -

ಮಣಿಯಪಂಡ ಮೊಣ್ಣಪ್ಪ ಎಂಬವರಿಗೆ ಸೇರಿದ ಗಬ್ಬದ ಹಸು (ಗರ್ಭಿಣಿ ಹಸು)ವನ್ನು ಹುಲಿಯು ಕೊಂದು ತಿಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ಹುಲಿಯು ಹಸುವನ್ನು ಭಕ್ಷಿಸುತ್ತಿದ್ದು, ಭಯಗೊಂಡ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಹಿಂದಿರುಗಿದ್ದಾರೆ. ಹುಲಿ ತೆರಳಿದ ಬಳಿಕ ಸ್ಥಳದಲ್ಲಿ ಅರಣ್ಯಾಇಲಾಖೆ ಸಿಬ್ಬಂದಿ ಬೋನ್ ಅಳವಡಿಸಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಹುಲಿಯ ಆಕ್ರಮಣವು ಅತಿಯಾಗಿದ್ದು, ಗ್ರಾಮಸ್ಥರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಸ್ಥಳಕ್ಕೆ ರೈತ ಸಂಘದ ಸದಸ್ಯರು  ಭೇಟಿ ನೀಡಿ ಪರಿಸ್ಥಿಯ ಬಗ್ಗೆ ಅವಲೋಕನ ನಡೆಸಿದ್ದಾರೆ.



Join Whatsapp