ಹಸು,ಕರು, ರೈತನ ಮೇಲೆ ಹುಲಿ ದಾಳಿ: ಗ್ರಾಮಸ್ಥರ ಆಕ್ರೋಶ

Prasthutha|

- Advertisement -

ಮೈಸೂರು : ನಂಜನಗೂಡು ತಾಲೂಕಿನ ಮಹದೇವ ನಗರದಲ್ಲಿ ರೈತನ ಮೇಲೆ ಹುಲಿ ದಾಳಿ ನಡೆಸಿದೆ. ದನ ಮೇಯಿಸುತ್ತಿದ್ದ ರೈತ ವೀರಭದ್ರ ಭೋವಿ ಹುಲಿ‌ ದಾಳಿಗೊಳಗಾದ ರೈತ.ಗ್ರಾಮದ ಮತ್ತಿಮರದ ಜೇನುಕಟ್ಟೆಯ ಬಳಿ ವೀರಭದ್ರ ದನ ಮೇಯಿಸುತ್ತಿದ್ದಾಗ ಘಟನೆ ಸಂಭವಿಸಿದೆ.

ರೈತ ದಾಳಿಗೊಳಗಾಗುವ ಮೊದಲು ಹಸು ಹಾಗೂ ಕರುವಿನ ಮೇಲೆ ಹುಲಿ ದಾಳಿ ನಡೆಸಿದೆ. ಈ ವೇಳೆ ಹಸುವನ್ನು ರಕ್ಷಿಸಲು ವೀರಭದ್ರ ಹೋಗಿದ್ದಾಗ ಆತನ ಮೇಲೆಯೂ ಹುಲಿ ದಾಳಿ ನಡೆಸಿದೆ.

- Advertisement -

ಸ್ಥಳಕ್ಕೆ ಹಡಿಯಾಲ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಮಹಾದೇವನಗರ್ ರೈತರು ಆಕ್ರೋಶ ಹೊರಹಾಕಿದ್ದಾರೆ.



Join Whatsapp