ಕಾನ್ಸರ್ ಕಾರಣ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Prasthutha|

ಬೆಂಗಳೂರು: ಕ್ಯಾನ್ಸರ್ ಇದೆ ಎಂದು ತಿಳಿದು ಮೂವರಿದ್ದ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ.

- Advertisement -

ಕೋಣನಕುಂಟೆಯ ಮಹೇಶ್ (44)ಅವರ ಪತ್ನಿ ಜ್ಯೋತಿ ಮತ್ತು ಮಗ ನಂದೀಶ್ ಗೌಡ (9) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಮಹೇಶ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಪ್ರತಿದಿನ ಮಾತ್ರೆ ತೆಗೆದುಕೊಂಡು ಸುಸ್ತಾಗಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹೊಟ್ಟೆ ನೋವಿಗೆ ಕಾರಣವೇನು ಎಂದು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದಾಗ ಕ್ಯಾನ್ಸರ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

ಈ ವಿಷಯ ಗೊತ್ತಾದ ಮಹೇಶ್ ತಾನು ಕ್ಯಾನ್ಸರ್ ನಿಂದ ಸಾವನ್ನಪ್ಪಿದರೆ, ತನ್ನ ಕುಟುಂಬ ಅನಾಥವಾಗುತ್ತದೆ. ಪತ್ನಿ, ಮಗು ಎಲ್ಲರೂ ಬೀದಿಗೆ ಬರುತ್ತಾರೆ. ತನ್ನ ಸಾವಿನ ನಂತರ ತನ್ನ ಪತ್ನಿ, ಮಕ್ಕಳ ಜೀವನ ಕಷ್ಟ ಎಂದು ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ.
ಮಹೇಶ್ ತಾನು ಮಾಡಿದ್ದ ನಿರ್ಧಾರದಂತೆ ಮನೆಯ ಒಂದು ರೂಂನಲ್ಲಿ ಫ್ಯಾನ್‍ ಗೆ ನೇಣು ಬಿಗಿದುಕೊಂಡು ಮಹೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೊಂದು ರೂಂನ ಬೆಡ್ ಮೇಲೆ ಪತ್ನಿ ಹಾಗೂ ನಂದೀಶ್ ಶವವಾಗಿ ಪತ್ತೆ ಆಗಿದ್ದಾರೆ. ಘಟನೆಯಲ್ಲಿ ಪತ್ನಿ ಹಾಗೂ ಮಗು ವಿಷ ಸೇವಿಸಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಕುರಿತು ಮಹೇಶ್ ಡೆತ್‍ ನೋಟ್ ಬರೆದಿಟ್ಟಿದ್ದಾರೆ. ಮಹೇಶ್ ಬರೆದಿರುವ ಅರ್ಧ ಪುಟದ ಡೆತ್ ನೋಟ್‍ನಲ್ಲಿ ಆನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



Join Whatsapp