ಟಿಎಂಸಿ ನಾಯಕನ ಮನೆಯಲ್ಲಿ ಸ್ಫೋಟ, ಮೂವರ ಸಾವು 

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಟಿಎಂಸಿ- ತೃಣಮೂಲ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷ ರಾಜ್ ಕುಮಾರ್ ಮನ್ನಾ ಅವರ ಮನೆಯಲ್ಲಿ ಸ್ಫೋಟ ನಡೆದಿದ್ದು, ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಸ್ಫೋಟವು ಅರ್ಜುನ್ ನಗರ ಪ್ರದೇಶದಲ್ಲಿ ನಡೆದಿದೆ.

- Advertisement -

ಇದು ಬಿಜೆಪಿ ಷಡ್ಯಂತ್ರ ಎಂದು ಟಿಎಂಸಿ ಹೇಳಿದರೆ, ತೃಣಮೂಲ ಕಾಂಗ್ರೆಸ್ಸಿಗರು ಬಾಂಬು ತಯಾರಿಸುತ್ತಿದ್ದರು ಎಂದು ಬಿಜೆಪಿ ಆಪಾದಿಸಿದೆ.

ಭೂಪತಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಕಾಜಲ್ ದತ್ತ ಅವರು ಸ್ಫೋಟ ಸ್ಥಳದಲ್ಲಿ ಮೂವರ ಮೃತದೇಹ ಸಿಕ್ಕಿರುವುದಾಗಿ ಹೇಳಿದ್ದಾರೆ. ಆದರೆ ಸತ್ತವರು ಯಾರು ಎಂಬುದನ್ನು ಇನ್ನಷ್ಟೆ ಗೊತ್ತಾಗಬೇಕಾಗಿದೆ. ತೃಣಮೂಲ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರು ಪಕ್ಕದ ಕಾಂಟೈನಲ್ಲಿ ಶನಿವಾರ ಪಕ್ಷದ ಜಾಥಾ ಇಟ್ಟುಕೊಂಡಿದ್ದರು. ಅದರ ನಡುವೆ ಈ ಸ್ಫೋಟ ನಡೆದಿದೆ.

- Advertisement -

ಬಂಗಾಳ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಜೆಪಿಯ ಸುವೇಂಧು ಅಧಿಕಾರಿಯವರು ಟಿಎಂಸಿಯವರು ಬಾಂಬು ತಯಾರಿಸುತ್ತಿದ್ದರು ಎಂದು ಆಪಾದಿಸಿದ್ದಾರೆ.

ಭಾಗ್ಬನ್ ಪುರ ಎರಡನೇ ಹಂತದ ಭೂಪತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟಿಎಂಸಿ ನಾಯಕ ರಾಜ್ ಕುಮಾರ್ ಮನ್ನಾ ಅವರ ಮನೆಯಲ್ಲಿ ನಡೆದ ಈ ಸ್ಫೋಟದಲ್ಲಿ ಮೂವರು ಸತ್ತಿರುವುದಲ್ಲದೆ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿದು ಬಂದಿದೆ. ಸತ್ತವರಲ್ಲಿ ರಾಜ್ ಕುಮಾರ್ ಮನ್ನಾ ಸೇರಿದ್ದಾರೆ.

Join Whatsapp