ಇಂದು ವಿದ್ವೇಷ ಕಾರಿದವರು ನಾಳೆ ಉಡುಪಿಯನ್ನೂ ಇನ್ನೊಂದು ಮಣಿಪುರ ಮಾಡುತ್ತಾರೆ: ಕೆ.ಅಶ್ರಫ್

Prasthutha|

ಮಂಗಳೂರು: ಇಂದು ವಿದ್ವೇಷ ಕಾರಿದವರು ನಾಳೆ ಉಡುಪಿಯನ್ನೂ ಇನ್ನೊಂದು ಮಣಿಪುರ ಮಾಡುತ್ತಾರೆ ಎಂದು ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಮತೀಯ ವಿದ್ವೇಷ ವನ್ನೆ ಉಸಿರಾಗಿಸಿ ಕೊಂಡ ಸಂಘ ಪರಿವಾರಕ್ಕೆ ಮುಸ್ಲಿಮ್ ಹೊರತಾದ ಸಮಸ್ಯೆಗಳು ಪತ್ಯವಲ್ಲ. ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣದ ವಾಸ್ತವ ಸತ್ಯವನ್ನು ಮೀರಿ ಸಂಘ ಪರಿವಾರ ಸ್ಥಳೀಯ ಶಾಸಕ ಯಶ್ಪಾಲ್ ಸುವರ್ಣರ ಮೂಲಕ  ವಿಷಯವನ್ನು ರಾಷ್ಟ್ರ ಮಟ್ಟಕ್ಕೆ ವೈಭವೀಕರಿಸಲು ಪ್ರಯತ್ನಿಸುತ್ತಿದೆ. ಶೈಕ್ಷಣಿಕ ಸಂಸ್ಥೆಯ ವ್ಯಾಪ್ತಿಯಲ್ಲಿಯೇ ಬಗೆಹರಿಯುವ ಸಮಸ್ಯೆಯನ್ನು ಬಲವಂತವಾಗಿ ಹೊರ ತಂದಂತಿದೆ  ಮತ್ತು ಆ ಮೂಲಕ ಉಡುಪಿಯಿಂದಲೆ ಮತೀಯ ವಿದ್ವೇಶಿತ ಧೃವೀಕರಣಕ್ಕಾಗಿ ಸಜ್ಜು ಗೊಂಡನ್ತಿದೆ ಎಂದರು.

ಇಂದು ಯಷ್ಪಾಲ್ ಸುವರ್ಣಂತಹ ವಿದ್ವಂಸಕಾರಿ ಹಿನ್ನೆಲೆಯುಳ್ಳ ವ್ಯಕ್ತಿಯ ಮೂಲಕ ಮತೀಯ ಪ್ರಚೋದಿತ ಹೇಳಿಕೆಗಳನ್ನು ನೀಡಲಾಗುತ್ತಿದೆ.ಇಂದು ಮತೀಯ ವಿದ್ವೇಷ  ಕಾರುವವರು ನಾಳೆ ಉಡುಪಿಯನ್ನು ಇನ್ನೊಂದು ಮಣಿಪುರ ಮಾಡಲು ಹಿಂಜರಿಯಲಾರರು. ಮಣಿಪುರದಲ್ಲಿ ರಾಜ್ಯ ಪ್ರೇರಿತ ಜನಾಂಗೀಯ ಹತ್ಯೆಯನ್ನು ತುಟಿ ಪಿಟಿಕ್ ಎನ್ನದೆ ನಿಶ್ಯಬ್ದ ಪಾಲಿಸಿದ ಮತ್ತು ಮಣಿಪುರದ ಆದಿವಾಸಿ ಬಡ ಅಮಾಯಕ ಮಹಿಳೆಯರ ಬೆತ್ತಲೆ ಘಟನೆಗೆ ಕಿಂಚಿತ್ತೂ ಪ್ರತಿಭಟಿಸದ ಈ ಕೇಶವ ಕೃಪಾ ಅನುಯಾಯಿಗಳಿಗೆ ವಾಸ್ತವ ರಹಿತ ವಿಧ್ಯಾರ್ಥಿಗಳ ವೀಡಿಯೊ ಮಹಾ ಅಪರಾಧವಾಗಿ ಕಂಡದ್ದು ವಿಪರ್ಯಾಸ,ಇಂತಹ ಪ್ರಭೇದ ಶಕ್ತಿಗಳ ಸಾಂದರ್ಭಿಕ ಲಾಭದಾರಿಕೆಯನ್ನು ಜನರು ಅರ್ಥ ಮಾಡಿಕೊಳ್ಳಲಿದ್ದಾರೆ ಎಂದರು.



Join Whatsapp