ಬಿಜೆಪಿಯನ್ನು ಎದುರಿಸಲು ಧೈರ್ಯವಿಲ್ಲದವರು ಪಕ್ಷವನ್ನು ತೊರೆಯಬಹುದು: ರಾಹುಲ್ ಗಾಂಧಿ

Prasthutha|

ಜೈಪುರ: ಕಾಂಗ್ರೆಸ್ ಪಕ್ಷವು ಫ್ಯಾಸಿಸಂ ವಿರುದ್ಧ ಬಲವಾದ ಸಿದ್ಧಾಂತವನ್ನು ಹೊಂದಿರುವ ಪಕ್ಷವಾಗಿದೆ. ಆದ್ದರಿಂದ ಬಿಜೆಪಿಯನ್ನು ಎದುರಿಸಲು ಧೈರ್ಯವಿಲ್ಲದವರು ಪಕ್ಷವನ್ನು ತೊರೆಯಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ, ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ. ಪಕ್ಷದ ಸಿದ್ಧಾಂತವು ಲಕ್ಷಾಂತರ ಜನರ ಮನಸ್ಸಿನಲ್ಲಿದೆ. ನನ್ನ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಯೋಜಿತ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿದರು.


ಚೀನಾದ ಆಕ್ರಮಣವು ಕೇವಲ ಅತಿಕ್ರಮಣವಲ್ಲ, ಯುದ್ಧದ ಸಿದ್ಧತೆಯಾಗಿದೆ. ಚೀನಾ ಸ್ಪಷ್ಟವಾಗಿ ಯುದ್ಧಕ್ಕೆ ಸಿದ್ಧವಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಇದನ್ನು ಮುಚ್ಚಿಡುತ್ತಿದೆ. ಅರುಣಾಚಲ ಮತ್ತು ಲಡಾಖ್‌ ಗಡಿಗಳಲ್ಲಿ ಚೀನಾ ಯುದ್ಧದ ಸಿದ್ಧತೆ ನಡೆಸುತ್ತಿದೆ. ಆದರೆ ಕೇಂದ್ರ ಸರ್ಕಾರ ಚೀನಾದ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

Join Whatsapp