ಬಸವಣ್ಣ ವಿಷಯದಲ್ಲಿ ಸರಕಾರವನ್ನು ಟೀಕಿಸುವವರು ಕ್ಷುಲ್ಲಕ ಮನಸಿನವರು: ಸಚಿವ ಎಚ್‌.ಕೆ. ಪಾಟೀಲ್‌

Prasthutha|

ಹುಬ್ಬಳ್ಳಿ: ಬಸವೇಶ್ವರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರಕಾರ ಘೋಷಿಸಿರುವುದನ್ನು ರಾಜಕೀಯ ಎಂದು ಆರೋಪಿಸುವವರು ಕ್ಷುಲ್ಲಕ ಮನಸ್ಥಿತಿಯವರು ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದ್ದಾರೆ.

- Advertisement -

ನಗರದಲ್ಲಿ ಮಾತನಾಡಿದ ಅವರು, ಬಸವಣ್ಣನವರು ಮಾನವ ಕುಲಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು.ಅವರನ್ನು ಸಾಂಸ್ಕೃತಿಕ ನಾಯಕನೆಂದು ನಿರ್ಣಯ ಮಾಡಿದ ಸರಕಾರದ ನಿರ್ಣಯಕ್ಕೆ ಜನರು ಅಭಿಮಾನಪಟ್ಡಿದ್ದಾರೆ. ಮಠಾಧೀಶರು ಸೇರಿದಂತೆ ಎಲ್ಲ ಸಮುದಾಯಗಳ ಮುಖಂಡು ಅಭಿನಂದಿಸಿದ್ದಾರೆ.ಬಸವಣ್ಣ ವಿಷಯದಲ್ಲಿ ರಾಜಕಾರಣ ಬೆರೆಸುವವರ ತಲೆಯಲ್ಲಿ ರಾಜಕಾರಣ ಮಾತ್ರ ಇದೆ. ಟೀಕಿಸುವವರು ಏನೂ ಮಾಡಲಿಲ್ಲ. ಅದಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ ಎಂದು ಹೇಳಿದರು.



Join Whatsapp