ಉಳ್ಳಾಲ ಖಾಝಿ ಕುರಿತು ಸಂಘಪರಿವಾರದಿಂದ ಹೀಗೊಂದು ಅಪಪ್ರಚಾರ !

Prasthutha|

►ಆಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ಬಿಜೆಪಿ ನಾಯಕರ ಮುಖವಾಡ ಬಯಲು

- Advertisement -

ಮಂಗಳೂರು: ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅವರು ಆಹಾರಕ್ಕೆ ಮಂತ್ರಿಸಿ ಊದುವ ವೀಡಿಯೋ ಬಗ್ಗೆ ಅಪಪ್ರಚಾರ ನಡೆಸಿರುವ ಸಂಘಪರಿವಾರ ಹಾಗೂ ಬಿಜೆಪಿಯ ರಾಷ್ಟ್ರೀಯ ವಕ್ತಾರರು, ಮೌಲ್ವಿ ಆಹಾರಕ್ಕೆ ಉಗುಳುತ್ತಿದ್ದಾರೆಂದು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ.


ಕೂರಾ ತಂಙಳ್ ಅವರ ತಂದೆ ಸೈಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ರವರ ಉರೂಸ್ ಹಿನ್ನೆಲೆಯಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಉಳ್ಳಾಲದಲ್ಲಿ ಏರ್ಪಡಿಸಲಾಗಿತ್ತು. ಆಹಾರ ವಿತರಣೆಗೂ ಮುಂಚೆ ಕುರ್ ಆನ್ ಸೂಕ್ತಗಳನ್ನು ಓದಿ ಊದುವುದು ಇಲ್ಲಿನ ವಾಡಿಕೆ. ಆದರೆ ಇದನ್ನೇ ಮೌಲ್ವಿ ಆಹಾರಕ್ಕೆ ಉಗುಳಿದ್ದಾರೆ ಎಂದು ಬಿಂಬಿಸಲಾಗಿದೆ.
ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿರುವ ಆಲ್ಟ್ ನ್ಯೂಸ್ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ.

- Advertisement -


ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೀತಿ ಗಾಂಧಿ, ನವೀನ್ ಕುಮಾರ್ ಜಿಂದಾಲ್, ಗೌರವ್ ಗೋಯೆಲ್ ಮುಂತಾದವರು ತಂಙಲ್ ಬಗ್ಗೆ ಟ್ವಿಟರ್ ನಲ್ಲಿ ಅಪಪ್ರಚಾರವಾಗಿ ಬರೆದಿದ್ದಾರೆ.

https://twitter.com/goelgauravbjp/status/1457559564358864906?ref_src=twsrc%5Etfw%7Ctwcamp%5Etweetembed%7Ctwterm%5E1457559564358864906%7Ctwgr%5E%7Ctwcon%5Es1_c10&ref_url=http%3A%2F%2Fkannadadainika.com%2Fkoora-thangal%2F
Join Whatsapp