ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣ A+ ಪಡೆದಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ!

Prasthutha|

ತಿರುವನಂತಪುರಂ: ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೇರಳದ ರಾಜಧಾನಿ ತಿರುವನಂತಪುರಂ ಜಿಲ್ಲೆಯ ಚಿರಯಂಕೀಶ್ ಎಂಬಲ್ಲಿನ ಶ್ರೀ ಶಾರದಾವಿಲಾಸಂ ಶಾಲೆಯ ವಿದ್ಯಾರ್ಥಿನಿ ರಾಖಿಶ್ರೀ ಮೃತಪಟ್ಟವರು.

- Advertisement -

ಮೇ.19ರ ಶುಕ್ರವಾರದಂದು ಕೇರಳದಾದ್ಯಂತ ಪ್ರಕಟಗೊಂಡ SSLC ಪರೀಕ್ಷಾ ಫಲಿತಾಂಶದಲ್ಲಿ ರಾಖಿಶ್ರೀ ಸಂಪೂರ್ಣ ಎ ಪ್ಲಸ್‌ ಪಡೆದಿದ್ದರು. ರಾಖಿಶ್ರೀ ಸೇರಿದಂತೆ ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳು ಶನಿವಾರ ಶಾಲೆಯಲ್ಲಿ ಹಾಜರಿದ್ದರು. ನಂತರ ಸಂಜೆ ವೇಳೆ ವಿದ್ಯಾರ್ಥಿನಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

- Advertisement -

ಸದ್ಯ ಮೃತದೇಹವನ್ನು ಚಿರಯಂಕೀಶ್ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ನಾಳೆ ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗುವುದು. ಮೃತರು ಓರ್ವ ಸಹೋದರಿ, ತಂದೆ ರಾಜೀವ್, ತಾಯಿ ಶ್ರೀವಿದ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  

Join Whatsapp