KSRTC ಬಸ್ ಅನ್ನು ಬಿಡದ ಕಳ್ಳರು: ಬಸ್ ಹುಡುಕಾಟಕ್ಕಾಗಿ ಎರಡು ಪೊಲೀಸ್ ತಂಡ ರಚನೆ

Prasthutha|

ಕಲಬುರಗಿ: ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಕಳ್ಳತನವಾಗಿರುವ ಘಟನೆ ಜಿಲ್ಲೆಯ ಚಿಂಚೋಳಿಯಲ್ಲಿ ನಡೆದಿದೆ.

- Advertisement -


ಬೀದರ್ ಬಸ್ ಡಿಪೋ- 2ಗೆ ಸೇರಿದ ಕೆಎ 38 ಎಫ್ 971 ಸಂಖ್ಯೆಯ ಬಸ್ ಕಳುವಾಗಿದೆ. ಸೋಮವಾರ ರಾತ್ರಿ ಕೊನೆಯ ಪ್ರಯಾಣದ ನಂತರ ಬಸ್ ಅನ್ನು ತಂದು ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆದರೆ, ಮಂಗಳವಾರ ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಂದು ನೋಡಿದರೆ ಬಸ್ ಕಾಣಿಸುತ್ತಿಲ್ಲ. ಗಾಬರಿಯಾದ ಚಾಲಕ ಮತ್ತು ನಿರ್ವಾಹಕರು ಇಡೀ ಬಸ್ ನಿಲ್ದಾಣ, ಸುತ್ತಮುತ್ತಲ ಜಾಗದಲ್ಲಿ ಹುಡುಕಿದ್ದಾರೆ. ಆದರೆ, ಬಸ್ ಪತ್ತೆಯಾಗಿಲ್ಲ.


ಮಿರಿಯಾಣ ಮಾರ್ಗವಾಗಿ ತಾಂಡೂರು ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.
ಬಸ್ ಹುಡುಕಾಟಕ್ಕಾಗಿ ಎರಡು ಪೊಲೀಸ್ ತಂಡಗಳು ತೆಲಂಗಾಣಕ್ಕೆ ತೆರಳಿವೆ.

Join Whatsapp