ತೌಡುಗೋಳಿಯಲ್ಲಿ ಹಾಡಹಗಲೇ ಮನೆಗೆ ನುಗ್ಗುತ್ತಿರುವ ಕಳ್ಳರು; ಪೊಲೀಸರ ನಿಷ್ಕ್ರಿಯತೆಗೆ ಅಸಮಾಧಾನ

Prasthutha|

ಮಂಜೇಶ್ವರ: ಹಾಡಹಗಲೇ ಕಳ್ಳರು ಮನೆಗೆ ನುಗ್ಗಿದ ಘಟನೆ ಮಂಜೇಶ್ವರದ ತೌಡುಗೋಳಿ ಎಂಬಲ್ಲಿ ನಡೆದಿದೆ.

- Advertisement -

ಟಿಂಬರ್ ಮರ್ಚೆಂಟ್ ಕೆ. ಮುಹಮ್ಮದ್ ಹನೀಫ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ಸಂಜೆ ಹೊತ್ತಲ್ಲಿ ಕಳ್ಳರು ಹಿಂಬಾಗಿಲು ಒಡೆದು ನುಗ್ಗಿದ್ದಾರೆ. ಡಿ. 1 ರಂದು ಹನೀಫ್ ನಿತ್ಯದಂತೆ ಹೊರಹೋಗಿದ್ದು, ಮಡದಿ ಮಕ್ಕಳು ಮಧ್ಯಾಹ್ನದ ಬಳಿಕ ಮನೆ ಬಂದ್ ಮಾಡಿ ಮಂಗಳೂರಿಗೆ ಹೊರಟಿದ್ದರು. ಸುಮಾರು 6 ಗಂಟೆಯ ಹೊತ್ತಿಗೆ ಹನೀಫ್ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿದ್ದು, ಒಳಗಡೆ ಕಪಾಟುಗಳಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಹಣ ಬಂಗಾರ ಮನೆಯಲ್ಲಿಲ್ಲದ ಕಾರಣ ಗುರುತರವಾದ ನಷ್ಟ ಸಂಭವಿಸಲಿಲ್ಲ.


ತೌಡುಗೋಳಿಯಲ್ಲಿ ತಿಂಗಳ ಅಂತರದಲ್ಲಿ 200 ಮೀಟರ್ ಆಸುಪಾಸಲ್ಲಿ ಎರಡು ಮನೆಗಳಿಗೆ ಕಳ್ಳರು ಹಾಡಹಗಲೇ ನುಗ್ಗಿದ್ದಾರೆ. ಆದರೆ ಮಂಜೇಶ್ವರ ಪೊಲೀಸರು ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅಂತಹದ್ದೇನಾಗಿದೆ ಈಗ, ನಮಗೇನೂ ಮಾಡಲಾಗದು, ನೀವೇ ಊರವರು ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಿ ಎಂದೆಲ್ಲ ಉಡಾಫೆಯ ಉತ್ತರ ಪೊಲೀಸರದ್ದಾಗಿದೆ ಎಂದು ಸ್ಥಳೀಯರು ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

- Advertisement -


ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಿ ಕಳ್ಳರನ್ನು ಬಂಧಿಸಿ ಸ್ಥಳೀಯರ ಆತಂಕವನ್ನು ದೂರ ಮಾಡಬೇಕಾದ ಪೊಲೀಸರ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂದು ತೌಡುಗೋಳಿಯ ಊರವರು ಹೇಳುತ್ತಿದ್ದಾರೆ.

Join Whatsapp