ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿಲ್ಲ: ಸಂಸದ ಶಫಿಕುರ್ ರಹ್ಮಾನ್ ಬರ್ಕ್

Prasthutha|

ಲಖನೌ: ವಾರಣಾಸಿಯ ಐತಿಹಾಸಿಕ ಜ್ಞಾನವಾಪಿ ಮಸೀದಿಯಲ್ಲಿ ಯಾವುದೇ ಶಿವಲಿಂಗ ಪತ್ತೆಯಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹ್ಮಾನ್ ಬರ್ಕ್ ತಿಳಿಸಿದ್ದಾರೆ.

- Advertisement -

2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಶಿವಲಿಂಗ ಪತ್ತೆ ಎಂಬ ಸುಳ್ಳನ್ನು ಪ್ರಚಾರ ಪಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿಲ್ಲ ಎಂಬುದು ಇತಿಹಾಸದಿಂದ ಬಹಿರಂಗವಾಗುತ್ತದೆ. 2024 ರ ಚುನಾವಣೆಯ ಹಿತದೃಷ್ಟಿಯಿಂದ ಇಲ್ಲದ ಶಿವಲಿಂಗದ ಚರ್ಚೆಯನ್ನು ಹುಟ್ಟು ಹಾಕಲಾಗಿದೆ ಎಂದು ಕಿಡಿಕಾರಿದ್ದಾರೆ.

Join Whatsapp