ಇರುವೆಗೆ ಹೆದರಿ ಊರು ಬಿಟ್ಟ ಗ್ರಾಮಸ್ಥರು!

Prasthutha|

ಭುವನೇಶ್ವರ್: ಒಡಿಶಾದ ಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಚಿತ್ರವಾದ ಸಮಸ್ಯೆ ಎದುರಾಗಿದ್ದು, ವಿಷಪೂರಿತ ಇರುವೆಗಳು ದಾಳಿ ಮಾಡಲಾರಂಭಿಸಿದೆ. ಇದರಿಂದಾಗಿ ಬಹುತೇಕ ಗ್ರಾಮಸ್ಥರು ಊರು ತೊರೆಯುತ್ತಿದ್ದಾರೆ ಎನನಲಾಗುತ್ತಿದೆ. ಜಿಲ್ಲಾ ಆಡಳಿತ ಹಾಗೂ ಒಡಿಶಾದ ಕೃಷಿ ಹಾಗೂ ತಂತ್ರಜ್ಞಾನ ವಿವಿಯ ವಿಜ್ಞಾನಿಗಳು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

- Advertisement -

ಬ್ರಹ್ಮನ್ಸಾಹಿ ಗ್ರಾಮದಲ್ಲಿ ಈ ವಿಚಿತ್ರ ಸಮಸ್ಯೆ ಎದುರಾಗಿದೆ. ಲಕ್ಷಾಂತರ ಕೆಂಪು ಹಾಗೂ ಫೈರ್ ಆಂಟ್ ಎಂದು ಕರೆಸಿಕೊಳ್ಳುವ ಇರುವೆಗಳು ಗ್ರಾಮದಲ್ಲಿ ಕಾಣಿಸಿಕೊಂಡಿವೆ.

ಮನೆಗಳು, ರಸ್ತೆ, ಕೃಷಿ ಭೂಮಿ, ಮರ ಹೀಗೆ ಎಲ್ಲೆಂದರಲ್ಲಿ ಇರುವೆಗಳ ಹಿಂಡು ಕಾಣಲಾರಂಭಿಸಿವೆ. ಹಲವರಿಗೆ ಈ ಇರುವೆಗಳು ಕಚ್ಚಿದ್ದು, ಊತ, ಚರ್ಮದ ಕಿರಿಕಿರಿ ಉಂಟಾಗಿದೆ. ಸಾಕು ಪ್ರಾಣಿಗಳ ಮೇಲೆಯೂ ಇರುವೆಗಳು ದಾಳಿ ಮಾಡಿವೆ.

- Advertisement -

ಇರುವೆ ಕಾಟ ತಡೆಯಲಾರದೇ ಗ್ರಾಮದಲ್ಲಿರುವ ಹಲವರು ಗ್ರಾಮವನ್ನು ತೊರೆಯುತ್ತಿದ್ದಾರೆ. ಕೆಲವರು ಕೀಟನಾಶಕ ಪುಡಿಗಳನ್ನು ವೃತ್ತಾಕಾರದಲ್ಲಿ ಸಿಂಪಡಿಸಿ ಇರುವೆಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ.
ಪ್ರವಾಹದ ಕಾರಣ ಸಮಸ್ಯೆ ಎಂದು ಅಂದಾಜಿಸಲಾಗಿದೆ. ಆದರೆ ಈ ಹಿಂದೆಯೂ ಗ್ರಾಮದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಆದರೆ ಎಂದೂ ಸಮಸ್ಯೆ ಎದುರಾಗಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.




Join Whatsapp