ಐವನ್ ಡಿಸೋಜರ ಮನೆಗೆ ಕಲ್ಲು ತೂರಾಟ ನಡೆದದ್ದು ತಡವಾಯಿತು, ಮೊನ್ನೆಯೇ ಆಗಬೇಕಿತ್ತು: ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆ

Prasthutha|

ಉಜಿರೆ: ಎಂಎಲ್ ಸಿ ಐವನ್ ಡಿಸೋಜರ ಮನೆ ಮೇಲೆ ಕಲ್ಲು ತೂರಾಟ ನಡೆದದ್ದು ತಡವಾಯಿತು. ಅದು ಮೊನ್ನೆಯೇ ಆಗಬೇಕಿತ್ತು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಐವನ್ ಡಿಸೋಜರ ವಿರುದ್ದ ಕೇಸ್ ಹಾಕುವ ಕಾರ್ಯ ಮಾಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.


ರಸ್ತೆಯಲ್ಲಿ ನಮಾಝ್ ಮಾಡಿದ್ದನ್ನು ವಿರೋಧಿಸಿ ಕೇವಲ ಹೇಳಿಕೆ ನೀಡಿದ್ದಕ್ಕೆ ಕೇಸ್ ಹಾಕಿದ್ದಾರೆ. ಬೆಳ್ತಂಗಡಿ ಶಾಸಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಆದರೆ ಐವನ್ ವಿರುದ್ಧ ಯಾಕೆ ಕೇಸ್ ದಾಖಲಿಸುತ್ತಿಲ್ಲ? ಪೊಲೀಸರು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಅದರಿಂದಾಗಿಯೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.



Join Whatsapp