ರಾಜಕೀಯ ರಣತಂತ್ರ ಪ್ರಾರಂಭ : JDS ಶಾಸಕರು ರೆಸಾರ್ಟಿಗೆ ಶಿಫ್ಟ್

Prasthutha|

ಬೆಂಗಳೂರು : ರಾಜ್ಯಸಭೆ ಎಲೆಕ್ಷನ್​ಗೆ ರಣತಂತ್ರ ಪ್ರಾರಂಭ​ ಆಗಿದ್ದು, ಮತದಾನಕ್ಕೆ ಒಂದು ದಿನ ಮುನ್ನವೇ ಜೆಡಿಎಸ್​ MLAಗಳನ್ನು ಹೋಟೇಲ್ ​​ಗೆ ಶಿಫ್ಟ್ ಮಾಡಲಾಗಿದೆ. ಕಾಂಗ್ರೆಸ್​, ಬಿಜೆಪಿ ಗಾಳಕ್ಕೆ ಬೀಳದಂತೆ ಪ್ಲಾನ್​​​ ನಡೆಸಲಾಗಿದೆ.

- Advertisement -

ಜೆಡಿಎಸ್ ವಕ್ತಾರರು ಶಾಸಕರನ್ನು ಒಂದೆಡೆ ಕಲೆ ಹಾಕಿದ್ದು ಬೆಂಗಳೂರು ಹೊರವಲಯದ ತಾಜ್​ ವಿವಾಂತಗೆ ಶಾಸಕರನ್ನು ಶಿಫ್ಟ್​ ಮಾಡಿದ್ದಾರೆ. ಶಾಸಕರು ನಿನ್ನೆ ರಾತ್ರಿಯೇ ಹೋಟೆಲ್​ಗೆ ಬಂದಿದ್ದು 32 ಶಾಸಕರ ಪೈಕಿ 25 ಶಾಸಕರು ಹೋಟೆಲ್​​ನಲ್ಲಿದ್ದಾರೆ.

ಇನ್ನುಳಿದ ಐವರು ಶಾಸಕರು. ಕೋಲಾರದ ಶ್ರೀನಿವಾಸಗೌಡ, ಗುಬ್ಬಿಯ ಶ್ರೀನಿವಾಸ್, ಚಾಮುಂಡೇಶ್ವರಿಯ ಜಿ.ಟಿ.ದೇವೇಗೌಡ, ಅರಸೀಕೆರೆಯ ಶಿವಲಿಂಗೇಗೌಡ, ತುಮಕೂರು ಗ್ರಾಮಾಂತರದ ಗೌರಿಶಂಕರ್​ ಇನ್ನೂ ಬಂದಿಲ್ಲ. ಗೌರಿಶಂಕರ್​​​ ಸಿಂಗಾಪುರದಿಂದ ವಾಪಸ್ ಬರುತ್ತಿದ್ದಾರೆ. ಉಳಿದ ನಾಲ್ವರು ಬರ್ತಾರೋ ಇಲ್ವೇ ಎಂಬುವುದು ಸಂಶಯವಾಗಿದೆ.

- Advertisement -

ಹೆಚ್​ಡಿ ಕುಮಾರಸ್ವಾಮಿ ಇಂದು ಸಂಜೆ ಜೆಡಿಎಸ್​ ಶಾಸಕಾಂಗ ಸಭೆ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕುಮಾರಸ್ವಾಮಿ ಅವರಿಗೆ ಸಾಥ್​​​ ನೀಡಲಿದ್ದಾರೆ. ಪ್ರಾಶಸ್ತ್ಯದ ಮತಗಳ ಬಗ್ಗೆಯೂ ಸಂಜೆಯೇ ನಿರ್ಧಾರವಾಗುತ್ತದೆ.

ಒಟ್ಟಿ‌ನಲ್ಲಿ ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿ ರಾಜಕೀಯ ರಣತಂತ್ರ ಪ್ರಾರಂಭವಾಗಿದೆ



Join Whatsapp