ಕೋವಿಡ್ ನಿಂದ ಸತ್ತವರ ಆತ್ಮಗಳು ಬಿಜೆಪಿ ಸರ್ಕಾರವನ್ನು ಶಪಿಸದೆ ಇರದು: ಪ್ರಿಯಾಂಕ್ ಖರ್ಗೆ

Prasthutha|

ಬೆಂಗಳೂರು: ಬಜರಂಗ ದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಲು ಕೋವಿಡ್ -19 ರ ನಿಧಿಯನ್ನು ಉಪಯೋಗಿಸಿರುವ ಬಗ್ಗೆ ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಆಕ್ಸಿಜನ್, ಬೆಡ್, ಚಿಕಿತ್ಸೆ ಸಿಗದೆ ಬೀದಿ ಬೀದಿಗಳಲ್ಲಿ ನರಳಿ ಸತ್ತವರ ಆತ್ಮಗಳು ಬಿಜೆಪಿ ಸರ್ಕಾರವನ್ನು ಶಪಿಸದೆ ಇರಲಾರವು.

ಕೋವಿಡ್ ತೀವ್ರತೆ ಇದ್ದಾಗ ಜನರ ಜೀವ ರಕ್ಷಣೆಗೆ ಬಳಸಬೇಕಿದ್ದ   ಹಣವನ್ನು    ಬಳಸದೆ ಉಳಿಸಿಕೊಂಡು ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ ನೀಡಿದ್ದು ಬಿಜೆಪಿ ಸರ್ಕಾರದ ಕ್ರೌರ್ಯದ ಮನಸ್ಥಿತಿಗೆ ಸಾಕ್ಷಿ ಎಂದು ಕಿಡಿಕಾರಿದರು.

Join Whatsapp