ಹಣ ಕೊಡಲಿಲ್ಲವೆಂದು ಹೆತ್ತ ತಾಯಿಯ ಹತ್ಯೆ ಮಾಡಿ ಸೂಟ್​ಕೇಸ್​ಗೆ ತುಂಬಿಸಿಟ್ಟಿದ್ದ ಮಗ

Prasthutha|

ವಂಢೀಗಡ: ತಾನು ಕೇಳಿದ ಐದು ಸಾವಿರ ರೂಪಾಯಿ ಕೊಡಲಿಲ್ಲ ಎಂಬ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಶವ ತುಂಡರಿಸಿ ಸೂಟುಕೇಸಲ್ಲಿ ತುಂಬಿಸಿಟ್ಟಿದ್ದ ಆಘಾತಕಾರಿ ಘಟನೆ ಹರಿಯಾಣದ ಹಿಸ್ಸಾರ್​ನಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ. ಹಿಮಾಂಶು ಬಂಧಿತ ವ್ಯಕ್ತಿ.

- Advertisement -

ಹೆತ್ತು ಹೊತ್ತು ಬೆಳೆಸಿದ ಮಗನಿಂದಲೇ ಕೊಲೆಯಾದ ಮಹಿಳೆಯನ್ನು ಪ್ರತಿಮಾ ದೇವಿ ಎಂದು ಗುರುತಿಸಲಾಗಿದ್ದು, ಆರೋಪಿ ಇವರ ಮೃತದೇಹವನ್ನು ಪ್ರಯಾಗ್​ರಾಜ್​ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ಎಸೆಯಲು ಯತ್ನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಆರೋಪಿ ಹಿಮಾಂಶು ಐಐಟಿ ಆಕಾಂಕ್ಷಿಯಾಗಿದ್ದು, ತನ್ನ ತಾಯಿಯೊಂದಿಗೆ ಹರಿಯಾಣದ ಹಿಸ್ಸಾರ್​ನಲ್ಲಿ ನೆಲೆಸಿದ್ದ. ಆರೋಪಿ ತನ್ನ ತಾಯಿಯ ಬಳಿ 5 ಸಾವಿರ ರೂಪಾಯಿ ಹಣ ಕೇಳಿದ್ದು, ಇದಕ್ಕೆ ಅವರ ತಾಯಿ ಒಪ್ಪಿಲ್ಲ. ಬಳಿಕ ಇಬ್ಬರ ನಡುವೆ ಜಗಳ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತ ಸಿಟ್ಟಿನಲ್ಲಿ ಅವರನ್ನು ಹತ್ಯೆ ಮಾಡಿದ್ದಾನೆ ಎಂದಿದ್ದಾರೆ.

Join Whatsapp