ಇದುವರೆಗೆ ಹಲವು ಧ್ವಜಗಳನ್ನು ಹಿಡಿದು ಪುಂಡತನ ಮೆರೆದವರ ದುಷ್ಟ ಹಸ್ತದಲ್ಲಿ ರಾಷ್ಟ್ರಧ್ವಜವು ಅಗೌರವಗೊಳ್ಳಬಾರದು: ಕೆ.ಅಶ್ರಫ್

Prasthutha|

ಮಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಜನರಿಗೆ ದೇಶ ಪ್ರೇಮದ ಪಾಠ ಹಿಂದೆಂದಿಗಿಂತಲೂ ಪ್ರಸ್ತುತ ಹೆಚ್ಚು ಅಗತ್ಯವಿದೆ. ಹಲವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ನಂತರ ಈ ದೇಶದ ತ್ರಿವರ್ಣ ಧ್ವಜದ ಮೇಲೆ ಇನ್ನಿಲ್ಲದ ಪ್ರೀತಿ ಹುಕ್ಕಿ ಹರಿಯಲು ಆರಂಭಿಸಿದೆ. ಇದು ಅತ್ಯಂತ ಉತ್ತಮ ಬೆಳವಣಿಗೆ. ಆದರೆ ಭಾರತದ ರಾಷ್ಟ್ರ ದ್ವಜಕ್ಕೆ ಅದರದೇ ಆದ ಮಹತ್ವ ಗೌರವವಿದೆ. ರಾಷ್ಟ್ರದ್ವಜವಾದ ತ್ರಿವರ್ಣ ದ್ವಜವನ್ನು ದೇಶದ ಅಭಿಮಾನದಿಂದ ಸಮರ್ಪಕ ರೀತಿಯಲ್ಲಿ ಬಳಕೆ ಮಾಡಬೇಕು. ತಪ್ಪಿದಲ್ಲಿ ರಾಷ್ಟ್ರ ದೇಶಕ್ಕೆ ನೀಡುವ ಅಗೌರವವಾಗುತ್ತದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ತಿಳಿಸಿದ್ದಾರೆ.

- Advertisement -


ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ವರೆಗೆ ಹಲವು ಧ್ವಜಗಳನ್ನು ಹಿಡಿದು ಪುಂಡತನ ಮೆರೆದವರ ದುಷ್ಟ ಹಸ್ತದಲ್ಲಿ ದೇಶದ ಧ್ವಜವು ಅಗೌರವಗೊಳ್ಳಬಾರದು. ಆದ್ದರಿಂದ ರಾಷ್ಟ್ರ ಧ್ವಜ ಉಪಯೋಗದ ಬಗ್ಗೆ ಅಂತಹವರಿಗೆ ತರಬೇತಿ ನೀಡುವ ಕಾರ್ಯವನ್ನು ಸರಕಾರ ಮಾಡಬೇಕು. ರಾಷ್ಟ್ರ ಧ್ವಜವನ್ನು ಸಗಟು ನೆಲೆಯಲ್ಲಿ ವಿತರಿಸುವಾಗ ಜವಾಬ್ದಾರಿ ಇರುವವರು ಎಚ್ಚರಿಕೆ ವಹಿಸುವುದು ಸೂಕ್ತ. ರಾಷ್ಟ್ರ ದೇಶಕ್ಕೆ ಅವಮಾನಗೈಯ್ಯುವ ವಿಷಯದಲ್ಲಿ ಇಲ್ಲಿನ ನೈಜ ದೇಶ ಪ್ರೇಮಿ ಪ್ರಜೆಗಳನ್ನು ವಿನಾ ಕಾರಣ ಗುರಿಯಾಗಿಸುವ ಷಡ್ಯಂತ್ರದ ಅಪಾಯವನ್ನು ಅರಿತು ಕೊಳ್ಳಬೇಕಾಗಿದೆ ಎಂದು ಕೆ.ಅಶ್ರಫ್ ತಿಳಿಸಿದ್ದಾರೆ.

Join Whatsapp