ದ‌ಕ್ಷಿಣ ಕನ್ನಡ ಗಡಿಯಲ್ಲಿ ಮತ್ತೆ ಗಡಗಡ : ಶಬ್ಧದೊಂದಿಗೆ ನಡುಗಿದ ನೆಲ

Prasthutha|

ಕೊಡಗು: ಕಳೆದ ಎರಡು ದಿನಗಳ ಹಿಂದೆ ದಕ್ಷಿಣ ಕನ್ನಡ ಮತ್ತು ಕೊಡಗಿನ ಗಡಿ ಪ್ರದೇಶದ ಭಾಗದಲ್ಲಿ ಭೂಕಂಪನ‌ ಉಂಟಾಗಿತ್ತು. ಮತ್ತು ಸಾರ್ವಜನಿಕರಿಗೆ ಆತಂಕ ಸೃಷ್ಟಿ ಮಾಡಿದ್ದು ಇಂದು ಮತ್ತೆ ಸುಳ್ಯ ಭಾಗದಲ್ಲಿ ಮತ್ತೆ ಭೂ ನಡುಕ ಉಂಟಾಗಿದೆ ಎನ್ನಲಾಗಿದೆ.

- Advertisement -

ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಕಂಪಿಸಿ ಆತಂಕ ಸೃಷ್ಟಿಸಿದ್ದ ಭೂಮಿ ಈಗಷ್ಟೇ 7.45 ರ ವೇಳೆಗೆ ಬಹುತೇಕ ಕಡೆ ಶಬ್ದದೊಂದಿಗೆ ಎರಡು ಮೂರು ಸೆಕೆಂಡುಗಳಷ್ಟು ಕಂಪಿಸಿದೆ .ಇದೀಗ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು ಜನರು ಭಯದಿಂದ ಕಂಗಾಲಾಗಿದ್ದಾರೆ.

Join Whatsapp