ತಮ್ಮ ಬೀದಿಗೆ ಪಾನಿಪುರಿ ತಿನ್ನಲು ಬಂದ ದಲಿತರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಸವರ್ಣೀಯರು

Prasthutha|

ಮೈಸೂರು: ತಮ್ಮ ಬೀದಿಗೆ ಪಾನಿಪುರಿ ತಿನ್ನಲು ಬಂದ ದಲಿತ ಯುವಕರಿಗೆ ಮೇಲ್ವರ್ಗದ ತಂಡವೊಂದು ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮೈಸೂರು ತಾಲೂಕು ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ನಡೆದಿದೆ.

- Advertisement -

ಹಲ್ಲೆಯಿಂದಾಗಿ ದಲಿತ ಯುವಕರಿಗೆ ಗಂಭೀರ ಗಾಯಗಳಾಗಿದ್ದು, ಆರು ಮಂದಿ ಆರೋಪಿಗಳನ್ನು ದಲಿತ ದೌರ್ಜನ್ಯ ಪ್ರಕರಣದಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅರಸಿನಕೆರೆ ಗ್ರಾಮದ ನಿವಾಸಿಗಳಾದ ಮೂರ್ತಿ, ಸಚಿನ್, ನವೀನ್, ಚಂದನ್, ಮಹದೇವಸ್ವಾಮಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ.

- Advertisement -

ದಲಿತ ಯುವಕ ಪ್ರಸನ್ನ ಎಂಬಾತ, ಪಾನಿಪುರಿ ತಿಂದು ಪ್ಲೇಟ್ ಅನ್ನು ಡಸ್ಟ್ ಬಿನ್ ಗೆ ಹಾಕಲಿಲ್ಲ ಎಂಬುದನ್ನೇ ನೆಪವಾಗಿಟ್ಟು ಮೇಲ್ವರ್ಗದ ವ್ಯಕ್ತಿಯೋರ್ವ ಪ್ರಶ್ನಿಸಿದ್ದು, ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದಾದ ನಂತರ ಸವರ್ಣೀಯರ ತಂಡವೊಂದು ದಲಿತರ ಬೀದಿಯಲ್ಲಿರುವ ಪ್ರಸನ್ನರ ಮನೆಗೆ ನುಗ್ಗಿ ಪ್ರಸನ್ನ ಸಹಿತ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp