BJP ಸುಲಭ ಶೌಚಾಲಯದಲ್ಲಿ ಸ್ಥಾಪನೆಯಾದ ಪಕ್ಷ;  ಸಿಟಿ ರವಿ ಹಫ್ತಾ ವಸೂಲಿಯ ಜನಕ: ಬಿ. ಕೆ ಹರಿಪ್ರಸಾದ್

Prasthutha|

ಮೈಸೂರು: ಭಾರತೀಯ ಜನತಾ ಪಾರ್ಟಿಯ ರಾಜಕೀಯ ಸುಲಭ ಶೌಚಾಲಯದಲ್ಲಿ ತಯಾರಾಗಿರುವಂತಹದ್ದು ಎಂದು ವಿಪಕ್ಷ ನಾಯಕ  ಬಿ. ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಫ್ತಾ ವಸೂಲಿಯ ಜನಕ ಸಿಟಿ ರವಿ. ಬಾಬಾ ಬುಡನ್ ಗಿರಿಯಲ್ಲಿ ಹಫ್ತಾ ವಸೂಲಿ ಮಾಡಿದ್ದೇ ಇವರು. ಗೋ ಮಾಂಸ ಮಾರುತ್ತಿದ್ದ ಮುಸ್ಲಿಮರಿಂದ ಹಫ್ತಾ ವಸೂಲಿ ಮಾಡಿದ ಇತಿಹಾಸ ಸಿಟಿ ರವಿ ಗೆ ಇದೆ. ಈ ಸಿ ಟಿ ರವಿಗೆ 15 ದಿನ  ಟೈಂ ಕೊಡುತ್ತೇನೆ. ತಾಕತ್ ಇದ್ರೆ, ಧಮ್ ಇದ್ರೆ ನನ್ನ ವಿರುದ್ಧ ಐಟಿ, ಇಡಿ ತನಿಖೆ ಮಾಡಿಸಲಿ. ನನ್ನ ಜೀವನದಲ್ಲಿ ಎಲ್ಲಾದರೂ ಎಫ್ ಐ ಆರ್ ಆಗಿದ್ರೆ , ನಾನು ನನ್ನ ರಾಜಕೀಯ ಜೀವನವನ್ನೇ ಬಿಡುತ್ತೇನೆ  ಎಂದು ಹೇಳಿದರು.

ನಾನು ಗ್ರಾಮ ಪಂಚಾಯಿತಿ ಚುನಾವಣೆ ನಿಂತು ಗೆದ್ದಿಲ್ಲ ನಿಜ. ಆದರೆ ಸಿಟಿ ರವಿ ಹಾಗೆ ನಾನು ಜಾತಿ, ಹಣ ಬಲದಿಂದ ಚುನಾವಣೆ ಎದುರಿಸುವ ಕ್ರಿಮಿನಲ್ ಅಲ್ಲ. ವಿಶ್ವಗುರು ಮೋದಿ ಯಾವ ಚುನಾವಣೆ ಗೆದ್ದು ಗುಜರಾತ್ ನ ಸಿಎಂ ಆಗಿದ್ದು ಎಂದು ಪ್ರಶ್ನಿಸಿದ್ದಾರೆ.

- Advertisement -

ಸಿಟಿ ರವಿ ಕೋಟ್ಯಾಧೀಶ, ಸಿ ಟಿ ರವಿ ಎಮ್ ಎಲ್ ಎ ಆದಾಗ ಎಷ್ಟು ದುಡ್ಡು ಇತ್ತು, ಈಗ  ಎಷ್ಟಿದೆ ಅಂತ ಲೆಕ್ಕ ಕೊಡಲಿ. ಅವರ ಭಾಷೆ ಅವರ ವ್ಯಕ್ತಿತ್ವ ತೋರಿಸುತ್ತೆ. ಕುಡಿದ ನಶೆಯಲ್ಲಿ ಕಾರು ಓಡಿಸಿ ಅಮಾಯಕ ಜನರನ್ನ ಕೊಂದವನಲ್ಲ ನಾನು  ಎಂದು ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿ ಟಿ ರವಿ ಆಲ್ದಳ್ಳಿ ಯಿಂದ ಬಂದವರು. ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಏನು ಅಂತಾ ತುಂಬಾ ಚೆನ್ನಾಗಿ ಗೊತ್ತಿದೆ. ಚಿಕ್ಕಮಗಳೂರು ಮೂಲದ ಕೋತ್ವಾಲ್ ನ ಸಂತತಿಯಾಗಿರುವ ಸಿ ಟಿ ರವಿ ರಸ್ತೆ ಮೇಲೆ ಲಿಫ್ಟ್ ಗಾಗಿ ಕಾಯ್ತಿದ್ದ‌ ಕಾಲದಲ್ಲೇ ನನ್ನ ಬಳಿ ಸ್ಕೂಟರ್ ಇತ್ತು ಎಂದು ಹೇಳಿದರು.

Join Whatsapp