ನಮ್ಮ ಸರ್ಕಾರ ಉರುಳಿಸಲು 7 ಶಾಸಕರಿಗೆ ಬಿಜೆಪಿ 25 ಕೋಟಿ ರೂ. ಆಫರ್ ನೀಡಿತ್ತು: ಕೇಜ್ರಿವಾಲ್

Prasthutha|

ದೆಹಲಿ: ನಮ್ಮ ಸರ್ಕಾರವನ್ನು ಉರುಳಿಸಲು ಆಮ್ ಆದ್ಮಿ ಪಕ್ಷದ ಏಳು ಶಾಸಕರಿಗೆ ಬಿಜೆಪಿ ಸೇರಲು ₹ 25 ಕೋಟಿ ಆಫರ್ ಮಾಡಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

- Advertisement -

ಇತ್ತೀಚೆಗೆ ಬಿಜೆಪಿಯವರು ದೆಹಲಿಯಲ್ಲಿರುವ ನಮ್ಮ 7 ಶಾಸಕರನ್ನು ಸಂಪರ್ಕಿಸಿ, ‘ಕೆಲವು ದಿನಗಳ ನಂತರ ನಾವು ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ಆ ಬಳಿಕ ಶಾಸಕರನ್ನು ವಿಭಜನೆ ಮಾಡುತ್ತೇವೆ. 21 ಶಾಸಕರ ಜತೆ ಮಾತುಕತೆ ನಡೆಸಲಾಗಿದೆ. ಇತರರೊಂದಿಗೆ ಸಹ ಮಾತನಾಡುತ್ತೇವೆ. ಆ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ. ನೀವು ಕೂಡ ಬರಬಹುದು. ನಾವು₹ 25 ಕೋಟಿ ನೀಡುತ್ತೇವೆ, ನೀವು ಬಿಜೆಪಿ ಟಿಕೆಟ್ ನಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಬಿಜೆಪಿ ಹೇಳಿರುವುದಾಗಿ ಅರವಿಂದ್ ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ.



Join Whatsapp