ಕಾಪುವಿನಲ್ಲಿ ತಾಯಿ, ಅಜ್ಜಿ, ಮುತ್ತಜ್ಜಿಗಾಗಿ ದೇವಸ್ಥಾನ ನಿರ್ಮಾಣ

Prasthutha|

ಕಾಪು: ಇಲ್ಲಿನ ಗರೋಡಿ ಬಳಿ ವಸಂತ ಮಾಧವ್ ಮತ್ತು ಅವರ ಮಕ್ಕಳಾದ ಮನೋಜ್, ಸಂತೋಷ್, ವಿನಯ್ 27 ಲಕ್ಷ ರೂಪಾಯಿ ವೆಚ್ಚದಲ್ಲಿ ಇಲ್ಲಿ ಮೂವರು ಮಹಿಳೆಯರ ಮೂರ್ತಿ ಇಟ್ಟ ದೇವಸ್ಥಾನ ಒಂದನ್ನು ಕಟ್ಟಿಸಿದ್ದು, ಅದು ಸೆಪ್ಟೆಂಬರ್ 3ರಂದು ಉದ್ಘಾಟನೆ ಆಗಿದೆ.

- Advertisement -

ಗೀತಾ ಯಾದವ ಪೂಜಾರಿ (53) ಅವರು ಇತ್ತೀಚೆಗೆ ನಿಧನರಾದರು. ಮುಂಬಯಿಯಲ್ಲಿ ಕಾರ್ಪೊರೇಟರ್ ಆಗಿದ್ದ ಅವರು  ತುಳುನಾಡು ಮತ್ತು ಸರ್ವ ಹಿತ ಕಾರ್ಯಗಳಲ್ಲಿ ಭಾರೀ ಸಾಧನೆ ಮಾಡಿದ ಕಾಂಗ್ರೆಸ್ ನಾಯಕಿಯಾಗಿದ್ದರು. ಅವರ ಗಂಡ ಮತ್ತು ಮಕ್ಕಳು ಈ ದೇವಸ್ಥಾನ ಕಟ್ಟಿಸಿದ್ದಾರೆ.

ದೇವಸ್ಥಾನದಲ್ಲಿ 52 ವಯಸ್ಸಿಗೆ ನಿಧನರಾಗಿದ್ದ ಗೀತಾರ ತಾಯಿ ಕಲ್ಯಾಣಿ ಬಾಯಿ ಪೂಜಾರಿ, 80ರ ಹಿರಿ ಜೀವನ ನಡೆಸಿ ನಿಧನರಾಗಿರುವ ಗೀತಾರ ಅಜ್ಜಿ ಬೈದಿ ಪೂಜಾರ್ದಿ ಅವರ ಮೂರ್ತಿಗಳು ಸಹ ಇವೆ.

Join Whatsapp