ತೆಲಂಗಾಣ: ಹಲವು ಕಾಂಗ್ರೆಸ್ ನಾಯಕರು ಬಿಆರ್‌ಎಸ್‌ನತ್ತ

Prasthutha|

- Advertisement -

ಹೈದರಾಬಾದ್‌: ತೆಲಂಗಾಣ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಫೋಟಿಸಿದೆ. ಟಿಕೆಟ್‌ ನಿರಾಕರಿಸಲ್ಪಟ್ಟ ಅಭ್ಯರ್ಥಿಗಳು ಕಾಂಗ್ರೆಸ್ ತೊರೆದು ಸಾಮೂಹಿಕವಾಗಿ ಬಿಆರ್‌ಎಸ್‌ ಕದ ತಟ್ಟುತ್ತಿರುವ ಬೆಳವಣಿಗೆ ನಡೆಯುತ್ತಿದೆ.

ಮೂರನೇ ಬಾರಿಗೆ ರಾಜ್ಯದಲ್ಲಿ ಗದ್ದುಗೆಗೇರುವ ನಿಟ್ಟಿನ ಪ್ರಯತ್ನ ನಡೆಸಿರುವ ಬಿಆರ್‌ಎಸ್‌ ಈ ಬೆಳವಣಿಗೆಯ ಫಾಯಿದ ತೆಗೆಯಲು ಉತ್ಸುಕವಾಗಿದ್ದು, ಟಿಕೆಟ್‌ ವಂಚಿತ ಕಾಂಗ್ರೆಸ್‌ ಮುಖಂಡರನ್ನು ಅತ್ಯಂತ ಉತ್ಸಾಹದಿಂದ ತನ್ನತ್ತ ಸೆಳೆಯುತ್ತಿದೆ.

- Advertisement -

ಅಕ್ಟೋಬರ್‌ 27ರಂದು 45 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಮಾಜಿ ಸಚಿವ ನಾಗಮ್‌ ಜನಾರ್ದನ್‌ ರೆಡ್ಡಿ, ಮಾಜಿ ಶಾಸಕರಾದ ಎರ್ರಾ ಶೇಖರ್‌, ಪಿ. ವಿಷ್ಣುವರ್ಧನ್‌ ರೆಡ್ಡಿ ಸೇರಿ ಹಲವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು.



Join Whatsapp