ತೆಲಂಗಾಣ: ಚಾಕುವಿನಿಂದ ಇರಿದು ಕಾಂಗ್ರೆಸ್ ನಾಯಕನ ಹತ್ಯೆ

Prasthutha|

ಕರೀಂನಗರ: ಆಡಳಿತಾರೂಢ ಕಾಂಗ್ರೆಸ್ ನಾಯಕನನ್ನು ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ತೆಲಂಗಾಣದ ಜಗ್ತಿಯಾಲ ಜಿಲ್ಲೆಯಲ್ಲಿ ಇಂದು (ಮಂಗಳವಾರ) ಬೆಳಿಗ್ಗೆ ನಡೆದಿದೆ.

- Advertisement -


ಗಂಗಾರೆಡ್ಡಿ (56) ಮೃತ ಕಾಂಗ್ರೆಸ್ ನಾಯಕ. ಜಗ್ತಿಯಾಲ ಜಿಲ್ಲೆಯ ಜಬಿತಾಪುರ ಗ್ರಾಮದಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ಇವರಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಗಂಗಾರೆಡ್ಡಿ ಅವರನ್ನು ಕಾರಿನಿಂದ ಇಳಿದ ವ್ಯಕ್ತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲಿಸರು ಹೇಳಿದ್ದಾರೆ.


ಸದ್ಯ ಮೃತದೇಹವನ್ನು ಜಗ್ತಿಯಾಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇವರು ಎಂಎಲ್ ಸಿ ಜೀವನ್ ರೆಡ್ಡಿ ಅವರ ಆಪ್ತರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.



Join Whatsapp