ತೆಲಂಗಾಣ: ಬಿಆರ್’ಎಸ್ ಶಾಸಕ ಕಾಂಗ್ರೆಸ್ ಸೇರ್ಪಡೆ

Prasthutha|

ತೆಲಂಗಾಣದಲ್ಲಿ ಕೆ ಚಂದ್ರಶೇಖರ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ಹಿನ್ನಡೆ ಅನುಭವಿಸಿದ್ದು, ಶಾಸಕ ಸಂಜಯ್ ಕುಮಾರ್ ಆಡಳಿತಾರೂಢ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಕುಮಾರ್ ಅವರನ್ನು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಿದ್ದಾರೆ ಎಂದು ಪಕ್ಷದ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

- Advertisement -


ಕುಮಾರ್ ಅವರು ಆಡಳಿತಾರೂಢ ಕಾಂಗ್ರೆಸ್ ಗೆ ಸೇರಿದ ಐದನೇ ಬಿಆರ್ ಎಸ್ ಶಾಸಕರಾಗಿದ್ದಾರೆ. ಹಿರಿಯ ಬಿಆರ್ ಎಸ್ ಶಾಸಕ ಮತ್ತು ಮಾಜಿ ಅಸೆಂಬ್ಲಿ ಸ್ಪೀಕರ್ ಪೋಚಾರಂ ಶ್ರೀನಿವಾಸ್ ರೆಡ್ಡಿ ಜೂನ್ 21 ರಂದು ಹಳೆಯ ಪಕ್ಷಕ್ಕೆ ಬದಲಾಯಿಸಿದ ಬೆನ್ನಲ್ಲೇ ಕುಮಾರ್ ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ.


ಇದಕ್ಕೂ ಮುನ್ನ ಬಿಆರ್ ಎಸ್ ಶಾಸಕರಾದ ಕಡಿಯಂ ಶ್ರೀಹರಿ, ದಾನಂ ನಾಗೇಂದರ್ ಮತ್ತು ತಲ್ಲಂ ವೆಂಕಟ್ ರಾವ್ ಅವರು ಆಡಳಿತ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಶಾಸಕರಲ್ಲದೆ, ಹೈದರಾಬಾದ್ ಮೇಯರ್ ವಿಜಯ ಲಕ್ಷ್ಮಿ ಆರ್ ಗದ್ವಾಲ್ ಸೇರಿದಂತೆ ಹಲವಾರು ಬಿಆರ್ ಎಸ್ ನಾಯಕರು ಕಾಂಗ್ರೆಸ್’ಗೆ ಸೇರ್ಪಡೆಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಆರ್ ಎಸ್ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

Join Whatsapp