ಶಾಲೆಯಲ್ಲಿ ತಲ್ವಾರ್ ಹಿಡಿದು ಓಡಾಟ: ಶಿಕ್ಷಕ ಅಮಾನತು

Prasthutha|

ದಿಸ್ಪುರ್: ಶಾಲೆ ಆವರಣದಲ್ಲಿ ಶಿಕ್ಷಕನೋರ್ವ ತಲ್ವಾರ್ ಹಿಡಿದುಕೊಂಡು ಓಡಾಡಿರುವ ಘಟನೆ ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ನಡೆದಿದೆ. ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

- Advertisement -


ಧೃತಿಮೇಧ ದಾಸ್ ಶಾಲೆಗೆ ತಲ್ವಾರ್ ಹಿಡಿದುಕೊಂಡು ಬಂದಿದ್ದು, ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮತ್ತು ಶಿಕ್ಷಣ ಇಲಾಖೆ ಸೂಚಿಸಿದೆ.


ಇತರ ಶಿಕ್ಷಕರು ಮಾಡುತ್ತಿದ್ದ ಕಿರಿಕಿರಿಯಿಂದ ಕೋಪಗೊಂಡು, ಹತಾಶೆಗೊಂಡಿದ್ದ ಧೃತಿಮೇಧ ದಾಸ್ ಎಲ್ಲರಿಗೂ ತಲ್ವಾರ್ ತೋರಿಸಿ ಎಚ್ಚರಿಕೆ ನೀಡಲೆಂದು ತಲ್ವಾರ್ ಹಿಡಿದುಕೊಂಡು ಶಾಲೆಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಧೃತಿಮೇಧ ದಾಸ್ ಅನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

Join Whatsapp