ಅಲ್ಪಸಂಖ್ಯಾತರೇ ಕಾಂಗ್ರೆಸ್ ಗೆ ಬುದ್ಧಿ ಕಲಿಸಿ, ಆಗ ನಿಮ್ಮ ಮಹತ್ವ ಗೊತ್ತಾಗುತ್ತದೆ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಹಾವೇರಿ: ಅಲ್ಪಸಂಖ್ಯಾತ ಬಾಂಧವರು ಕಾಂಗ್ರೆಸ್ ಗೆ ಒಂದು ಬಾರಿ ಬುದ್ಧಿ ಕಲಿಸಿ, ಆಗ ನಿಮ್ಮ ಮಹತ್ವ ಗೊತ್ತಾಗುತ್ತದೆ. ಅವರು ನಂತರ ಚಿಂತನೆ ನಡೆಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಹಾನಗಲ್ ನಲ್ಲಿ ಹೇಳಿಕೆ ನೀಡಿದ್ದಾರೆ.

- Advertisement -


ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರವಾಗಿ ಪ್ರಚಾರ ನಡೆಸಿದ ಸಿಎಂ, ಕಾಂಗ್ರೆಸ್ ನವರಿಗೆ ಕೇವಲ ಅಲ್ಪಸಂಖ್ಯಾತರ ಮತ ಅಷ್ಟೇ ಬೇಕು ಎಂಬುದು ನಮಗೂ ಗೊತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಬಾವಿಯಲ್ಲಿ ಇಟ್ಟಿದೆ.

ಅವಶ್ಯಕತೆ ಬಿದ್ದಾಗ ಮಾತ್ರ ಹಗ್ಗ ಬಿಟ್ಟು ಮೇಲಕ್ಕೆ ಎತ್ತುತ್ತಾರೆ. ನಂತರ ಕೆಲಸ ಮುಗಿದಿಂದ ಬಾವಿಗೆ ಬಿಟ್ಟು ಬಿಡುತ್ತಾರೆ. ಅವರನ್ನು ಗುತ್ತಿಗೆಗೆ ಪಡೆದಂತೆ ಬಳಕೆ ಮಾಡಿಕೊಳ್ಳುತ್ತಾರೆ ”ಎಂದು ಅವರು ದೂರಿದರು.

Join Whatsapp