ವೀಕ್ಷಣೆಯ ವೇಳೆ ಸಿಎಂ ಕಣ್ಣೀರಾಕಿದ್ದ 777 ಚಾರ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರಕಾರ

Prasthutha|

ಬೆಂಗಳೂರು: ವೀಕ್ಷಣೆಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕಣ್ಣೀರು ಹಾಕಿದ್ದ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರಕ್ಕೆ ರಾಜ್ಯ ಸರಕಾರ ತೆರಿಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರಕಾರ, ಚಾರ್ಲಿ ಚಿತ್ರದಲ್ಲಿ ನಾಯಿ ದತ್ತು ಪಡೆಯಬೇಕು ಎನ್ನುವ ಸಂದೇಶವಿದೆ, ಈ ಕಾರಣಕ್ಕೆ ತೆರಿಗೆ ವಿನಾಯಿತಿಯನ್ನು ಚಿತ್ರಕ್ಕ ನೀಡಲಾಗಿದೆ ಎಂದು ಹೇಳಿದೆ.

- Advertisement -

ಚಿತ್ರದಲ್ಲಿ ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶವಿದ್ದು, ಸಿನೆಮಾಗೆ ಶೇ.100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಕೋರಿ ಚಾರ್ಲಿ ನಾಯಕ ರಕ್ಷಿತ್ ಶೆಟ್ಟಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ ಬರೆದಿದ್ದರು, ಇದೀಗ ರಕ್ಷಿತ್ ಮನವಿಗೆ ಸ್ಪಂದಿಸಿರುವ ಸರಕಾರ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿದೆ.

ಇತ್ತೀಚೆಗಷ್ಟೆ ಮುಖ್ಯಮಂತ್ರಿ ಬೊಮ್ಮಾಯಿ ಚಾರ್ಲಿ ಚಿತ್ರ ವೀಕ್ಷಣೆಯ ವೇಳೆ ಬಿಕ್ಕಿ ಬಿಕ್ಕಿ ಅತ್ತ ವೀಡಿಯೋ ಸಖತ್ ವೈರಲ್ಲಾಗಿತ್ತು. ಸಿಎಂ ಕಣ್ಣೀರಿನ ಬಗ್ಗೆ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳೂ ನಡೆದಿತ್ತು.

Join Whatsapp