“ಕೃಷ್ಣಾ ಅಗ್ನಿಹೋತ್ರಿ ಕಾ ಕಹಾನಿ’’ ಪ್ರಬಂಧಕ್ಕೆ ತಸ್ಲೀಮಾಗೆ ಡಾಕ್ಟರೇಟ್ ಪದವಿ

Prasthutha|

ಮಂಗಳೂರು: “ ಕೃಷ್ಣಾ ಅಗ್ನಿಹೋತ್ರಿ ಕಾ ಕಹಾನಿ ಸಾಹಿತ್ಯ: ಸ್ತ್ರೀ ಅಸ್ಮಿತಾ ಕೀ ಪಹಚಾನ್” ಎಂಬ ಸಂಶೋಧನಾ ಪ್ರಬಂಧಕ್ಕೆ ತಸ್ಲೀಮಾರವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿದೆ.

- Advertisement -

ದಿವಂಗತ ಜಿ. ಎಚ್. ಅಬ್ದುಲ್ ಹಮೀದ್ ಮತ್ತು ನೆಫೀಸಾರವರ ಸುಪುತ್ರಿ ಹಾಗೂ ಮುಹಮ್ಮದ್ ಸಾಧಿಕ್ ರವರ ಪತ್ನಿಯಾದ ತಸ್ಲೀಮಾರವರು ಡಾ. ನಾಗರತ್ನ ಎನ್ ರಾವ್ ರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ “ ಕೃಷ್ಣಾ ಅಗ್ನಿಹೋತ್ರಿ ಕಾ ಕಹಾನಿ ಸಾಹಿತ್ಯ: ಸ್ತ್ರೀಅಸ್ಮಿತಾ ಕೀ ಪಹಚಾನ್” ಎಂಬ ಪ್ರಬಂಧಕ್ಕೆ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಹಿಂದಿ ವಿಭಾಗದಲ್ಲಿ ಪಿ.ಎಚ್ ಡಿ ಪಡೆದಿದ್ದಾರೆ. ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜು ಇದರ ಅಧೀನದಲ್ಲಿ ಹಿಂದಿ ವಿಷಯದಲ್ಲಿ ಪದವಿಯನ್ನು ಪಡೆದ ಮೊದಲ ಸಂಶೋಧನಾ ವಿದ್ಯಾರ್ಥಿನಿಯಾಗಿರುತ್ತಾರೆ.

Join Whatsapp