ತಮಿಳುನಾಡು: ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಕೈ ಜೋಡಿಸಿದ ಮುಸ್ಲಿಮರು

Prasthutha|

ವೆಲ್ಲೂರು: ಇಲ್ಲಿನ ಪೆರನಂಬಟ್ಟು ಎಂಬಲ್ಲಿ ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ನೆರೆಯ ಮುಸ್ಲಿಮರು ಕೈಜೋಡಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

- Advertisement -


ಕಳೆದ ಕೆಲವು ದಿನಗಳಿಂದ ಪೇರನಂಬಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೆರನಂಬಟ್ಟು ನಿವಾಸಿ ದಿನೇಶ್ (30) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತೀರಾ ಬಡತನ ಎದುರಿಸುತ್ತಿದ್ದ ಕುಟುಂಬಕ್ಕೆ ಅಂತ್ಯಸಂಸ್ಕಾರ ನಡೆಸಲು ಸ್ಥಳೀಯ ಮುಸ್ಲಿಮರು ನೆರವನ್ನು ನೀಡಿದ್ದಾರೆ.


ದಿನೇಶ್ ಶವಸಂಸ್ಕಾರ ನಡೆಸಲು ಸಹೋದರ ಸುಧಾಕರ್ ಮತ್ತು ಅವರ ತಾಯಿ ಸೇರಿದಂತೆ ಅವರ ಕುಟುಂಬ ಸದಸ್ಯರ ಕುಟುಂಬಿಕರಲ್ಲಿ ಮಜಿತೆ ಟ್ರಸ್ಟಿನ ಮುಸ್ಲಿಮ್ ಸದಸ್ಯರು ಮೃತದೇಹವನ್ನು ಹೊತ್ತು ಮತ್ತು ಹಿಂದೂ ವಿಧಿವಿಧಾನಗಳಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.

Join Whatsapp