ಬೈತಡ್ಕ ದರ್ಗಾ ಶರೀಫ್ ಜುಮಾ ಮಸೀದಿ ಬಳಿ ಅನುಮಾನಾಸ್ಪದ ವ್ಯಕ್ತಿ; ಸಮಗ್ರ ತನಿಖೆಗೆ ಆಗ್ರಹ

Prasthutha|

ಬೈತಡ್ಕ:  ಕಳೆದ ಎರಡು ದಿನಗಳ ಹಿಂದೆ ಬೈತಡ್ಕ ಪರಿಸರದಲ್ಲಿ ಅನುಮಾನಾಸ್ಪದ ವ್ಯಕ್ತಿ ಯೊಬ್ಬ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಬೈತಡ್ಕ ಜುಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ಆ  ವ್ಯಕ್ತಿಯನ್ನು ವಿಚಾರಣೆ ನಡೆಸುವಂತೆ ಬೆಳ್ಳಾರೆ ಆರಕ್ಷಕ ಠಾಣಾಧಿಕಾರಿಗಳಿಗೆ ದೂರು ನೀಡಲಾಗಿದೆ.

- Advertisement -

ಶಂಕಿತ ವ್ಯಕ್ತಿಯನ್ನು ಉಪ್ಪಿನಂಗಡಿ ಮೂಲದ ಸುಜಿತ್ ಎಂದು ಗುರುತಿಸಲಾಗಿದೆ. ರಾತ್ರಿ ಗಸ್ತು ಕರ್ತವ್ಯ ದಲ್ಲಿ ಇದ್ದಾಗ ಬೈತಡ್ಕ ಮಸೀದಿ ಹತ್ತಿರ ಅಮಲು ಪದಾರ್ಥ ಸೇವಿಸಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದಿದ್ದ. ವಿಚಾರಿಸಿದಾಗ ಉಪ್ಪಿನಂಗಡಿಗೆ ಹೋಗುವುದಾಗಿ ತಿಳಿಸಿದ್ದು, ವಾಹನ ಇಲ್ಲದೆ ಪರದಾಡುತ್ತಿದ್ದ. ಫೋನ್ ನಂಬರ್ ಕೇಳಿದಾಗ ಮೊಬೈಲ್ ಉಪಯೋಗಿಸುತ್ತಿಲ್ಲ ಎಂದು ತಿಳಿಸಿದ್ದಾಗಿ ಬೆಳ್ಳಾರೆ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಈತನನ್ನು ಬಂಧಿಸಿ ಸಮಗ್ರ  ತನಿಖೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಆದರೆ ಈ ವರೆಗೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

Join Whatsapp