ಕಾಂಗ್ರೆಸ್‌ನ ಮೂವರು ಸಂಸದರ ಅಮಾನತು ರದ್ದು

Prasthutha|

ನವದೆಹಲಿ: ಕಾಂಗ್ರೆಸ್ ಸಂಸದರಾದ ಕೆ. ಜಯಕುಮಾರ್, ಅಬ್ದುಲ್ ಖಲೀಕ್ ಮತ್ತು ವಿಜಯ್ ವಸಂತ್ ತಮ್ಮ ವರ್ತನೆಗೆ ಬೇಷರತ್ತಾಗಿ ವಿಷಾದ ವ್ಯಕ್ತಪಡಿಸಿದ ನಂತರ ಲೋಕಸಭೆಯ ವಿಶೇಷಾಧಿಕಾರ ಸಮಿತಿ ಮೂವರ ಅಮಾನತು ಹಿಂಪಡೆಯಲು ನಿರ್ಣಯವನ್ನು ಅಂಗೀಕರಿಸಿದೆ.

- Advertisement -

ಬಿಜೆಪಿಯ ಸುನೀಲ್ ಕುಮಾರ್ ಸಿಂಗ್ ನೇತೃತ್ವದ ವಿಶೇಷಾಧಿಕಾರ ಸಮಿತಿ ನಿರ್ಣಯ ಅಂಗೀಕರಿಸಿದ್ದು, ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸೋಮವಾರ ನೀಡಲಿದೆ. ಲೋಕಸಭೆಯ ಸೆಕ್ರೆಟರಿಯೇಟ್ ಮುಂದಿನ ವಾರ ತನ್ನ ಬುಲೆಟಿನ್‌ನಲ್ಲಿ ಅಮಾನತು ಹಿಂತೆಗೆದುಕೊಳ್ಳುವಿಕೆಯನ್ನು ಘೋಷಿಸಲಿದೆ.

ಚಳಿಗಾಲದ ಅಧಿವೇಶನದಲ್ಲಿ ಮೂವರ ಹೇಳಿಕೆಯನ್ನು ದಾಖಲಿಸಲಲು ಸಮಿತಿಯ ಮುಂದೆ ಕರೆಸಲಾಯಿತು. ಸಮಿತಿಯ ಮುಂದೆ ಸದನದಲ್ಲಿ ತಮ್ಮ ವರ್ತನೆಗೆ‌ ಮೂವರು ಸಂಸದರು ವಿಷಾದ ವ್ಯಕ್ತಪಡಿಸಿದ್ದಾರೆ.

- Advertisement -

Join Whatsapp