ಅಮಾನತುಗೊಂಡ ಸಂಸದರಿಂದ ಸಂಸತ್ತಿನಲ್ಲಿ 50 ಗಂಟೆಗಳ ಸುದೀರ್ಘ ಧರಣಿ

Prasthutha|

ನವದೆಹಲಿ : ತಮ್ಮ ಅಮಾನತು ಮತ್ತು ಬೆಲೆ ಏರಿಕೆ ಮತ್ತು ಜಿಎಸ್ಟಿ ದರ ಏರಿಕೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲ ಎಂದು ಆರೋಪಿಸಿರುವ ವಿರೋಧ ಪಕ್ಷದ ಸಂಸದರು  ಕೇಂದ್ರ ಸರ್ಕಾರ ಮತ್ತು ಅವರ ಅಮಾನತು ವಿರುದ್ಧ ಶುಕ್ರವಾರ ಬೆಳಿಗ್ಗೆ ಸಂಸತ್ತಿನ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ 50 ಗಂಟೆಗಳ ಹಗಲು-ರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ.

- Advertisement -

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅಶಿಸ್ತಿನ ವರ್ತನೆಗಾಗಿ 23 ರಾಜ್ಯಸಭಾ ಸಂಸದರು ಮತ್ತು 4 ಲೋಕಸಭಾ ಸಂಸದರು ಸೇರಿದಂತೆ ಒಟ್ಟು 27 ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಇದು ಮೇಲ್ಮನೆಯಲ್ಲಿ ಅತಿ ಹೆಚ್ಚು ಏಕ-ಬ್ಯಾಚ್ ಅಮಾನತು ಎಂದು ತಿಳಿದುಬಂದಿದೆ.

Join Whatsapp