ಬಿಜೆಪಿಯಿಂದ ಅಮಾನತಾದ ನಾಯಕ ಟಿಎಂಸಿ ಸೇರ್ಪಡೆ

Prasthutha|

ಕೋಲ್ಕತ್ತಾ: ಬಿಜೆಪಿಯಿಂದ ಅಮಾನತಾದ ನಾಯಕ ಜಯಪ್ರಕಾಶ್ ಮಜುಂದಾರ್ ಮಂಗಳವಾರ ತೃಣಮೂಲ ಕಾಂಗ್ರೆಸ್ ಸೇರಿದರು. ಅವರನ್ನು ಕೂಡಲೆ ರಾಜ್ಯ ಟಿಎಂಸಿ ಉಪಾಧ್ಯಕ್ಷರಲ್ಲಿ ಒಬ್ಬರಾಗಿ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ನಜ್ರುಲಮಂಚದಲ್ಲಿ ಹೇಳಿದರು.

- Advertisement -

ಪಶ್ಚಿಮ ಬಂಗಾಳದ ಬಿಜೆಪಿಯು ಅದರ ಇಬ್ಬರು ಉಪಾಧ್ಯಕ್ಷರಾದ ಮಜುಂದಾರ್ ಮತ್ತು ರಿತೇಶ್ ತಿವಾರಿಯವರಿಗೆ ಜನವರಿ 23ರಂದು ಶೋಕಾಸ್ ನೋಟೀಸು ನೀಡಿ ಮರುದಿನ ಅಮಾನತು ಮಾಡಿತ್ತು. ತಾತ್ಕಾಲಿಕ ಅಮಾನತು ಎಂದು ಹೇಳಲಾಗಿತ್ತು, ಆದರೆ ಶಿಸ್ತು ಕ್ರಮ ಕೈಗೊಳ್ಳುವ ಕೆಲಸ ಬಿಜೆಪಿಯಿಂದ ಆಗಲೇ ಇಲ್ಲ.

ಇತ್ತೀಚೆಗೆ ಸುಕಾಂತ ಮಜುಂದಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಇವರಿಬ್ಬರನ್ನು ಪಕ್ಷದ ಉಪಾಧ್ಯಕ್ಷ ಹುದ್ದೆಯಿಂದ ಕೈಬಿಡಲಾಗಿತ್ತು.

- Advertisement -

ಇವರಿಬ್ಬರೂ ಮತುವಾ ನಾಯಕ ಹಾಗೂ ಬಾಂಗಾಂವ್ ಸಂಸದರಾದ ಶಂತನು ಠಾಕೂರ್ ಜೊತೆಗೂ ಮಾತನಾಡಿದರು. ಇತ್ತೀಚಿಗೆ ನಗರಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕಡೆ ಸೋತಿತ್ತು. 

ಸಂಸದೆ ಲಾಕೆಟ್ ಚಟರ್ಜಿ ಜೊತೆಗೆ ಇವರಿಬ್ಬರು ಹೊಸ ಅಧ್ಯಕ್ಷರ ಸಭೆಯೊಂದಕ್ಕೂ ಹಾಜರಾಗಿದ್ದರು. ಆದರೆ ಮನಸ್ಸು ಬದಲಿಸಿ ಟಿಎಂಸಿ ಸೇರಿದ್ದಾರೆ.



Join Whatsapp