“ತ್ರಿಪುರಾ ಮುಸ್ಲಿಮರ ಮೇಲಿನ ದೌರ್ಜನ್ಯವೇ ನಿಜವಾದ ದೀಪಾವಳಿ ಆಚರಣೆ” ಎಂದ ಯೂಟ್ಯೂಬರ್ ಸುರೇಶ್ ರಜಪೂತ್ !

Prasthutha|

► ಹಿಂದೂಗಳೆಲ್ಲವೂ ಒಟ್ಟಾದರೆ ಮುಸ್ಲಿಮರ ಭವಿಷ್ಯ ಏನಾಗಬಹುದೆಂದು ಎಚ್ಚರಿಕೆ

- Advertisement -

“ನಿಜವಾದ ದೀಪಾವಳಿಯನ್ನು ತ್ರಿಪುರಾದಲ್ಲಿ ಆಚರಿಸಲಾಗಿದೆ. ದೀಪಾವಳಿ ಎಂದರೆ ಇದೇ. ತ್ರಿಪುರಾದಂತೆ ಎಲ್ಲಾ ಹಿಂದೂಗಳು ಎಚ್ಚೆತ್ತುಕೊಂಡರೆ, ನಿಮ್ಮ ಭವಿಷ್ಯ ಏನಾಗಬಹುದು ಊಹಿಸಿ ಎಂದು ತ್ರಿಪುರಾದಲ್ಲಿ ನಡೆದ ಮುಸ್ಲಿಮರ ಮೇಲಿನ ದೌರ್ಜನ್ಯದ ಕುರಿತಾಗಿ ಹಿಂದೂ ಶೇರ್ ಬಾಯ್ ಎಂದು ಕರೆಯಲ್ಪಡುವ ಬಲಪಂಥೀಯ ಯೂಟ್ಯೂಬರ್ ಸುರೇಶ್ ರಜಪೂತ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ಈತ ಯತಿ ನರಸಿಂಗಾನಂದ ಅವರ ಹಿಂಬಾಲಕ ಎಂದು ದಿ ವೈರ್ ವರದಿ ಮಾಡಿದೆ.

ವೀಡಿಯೋದಲ್ಲಿ ಮುಸ್ಲಿಮರನ್ನು ಅವಹೇಳಿಸಿರುವ ರಜಪೂತ್ ಮುಸ್ಲಿಂ ಪುರುಷರನ್ನು “ಪಿಂಪಕ್‌ಗಳು”, “ಪಂಕ್ಚರ್ ಮಕ್ಕಳು” ಮತ್ತು “ಜಿಹಾದಿಗಳು” ಎಂದು ಹೇಳಿದ್ದಾನೆ. ಅಲ್ಲದೇ ಮುಸ್ಲಿಂ ಮಹಿಳೆಯರ ಮೇಲೆ ಲೈಂಗಿಕ ಹಿಂಸಾಚಾರದ ಬೆದರಿಕೆಯನ್ನೂ ಒಡ್ಡಿದ್ದಾನೆ. ಈ ಮಧ್ಯೆ ಅವಹೇಳಿಸಿರುವ ತನ್ನ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಜಪೂತ್ ಫೇಸ್ ಬುಕ್ ನಲ್ಲಿದ್ದ ವೀಡಿಯೋ ವನ್ನು ಡಿಲೀಟ್ ಮಾಡಿದ್ದಾನೆ.

- Advertisement -

ಇಷ್ಟೇ ಅಲ್ಲದೇ ದೀಪಾವಳಿಯಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಟಾಕಿ ನಿಷೇಧ ಮಾಡಿದ್ದಕ್ಕಾಗಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಪಾಕಿಸ್ತಾನದ ವಿರುದ್ಧ ಭಾರತ ಸೋತಾಗ ದೆಹಲಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದಾಗ ನಿಮಗೆ ಯಾವುದೇ ಸಮಸ್ಯೆಗಳು ಇರಲಿಲ್ಲ. ನಿಮ್ಮ ಗಮನ ದೀಪಾವಳಿ ಮತ್ತು ಹೋಳಿಯ ಸಮಯದಲ್ಲಷ್ಟೇ ಬರುತ್ತದೆ. ಕೇಜ್ರಿವಾಲ್‌ ನಿಮ್ಮನ್ನು ಶೂಟ್ ಮಾಡಲಾಗುವುದು” ಎಂದು ಬೆದರಿಕೆ ಹಾಕಿದ್ದಾನೆ.

Join Whatsapp