ಒಂದೆಡೆ ಗೋಡ್ಸೆಯ ವೈಭವೀಕರಣ, ಮತ್ತೊಂದೆಡೆ ಗಾಂಧಿ ಆಶ್ರಮಕ್ಕೆ ಭೇಟಿ: ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ

Prasthutha|

ಮುಂಬೈ: ತನ್ನ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ಒಂದು ಕಡೆ ಗೋಡ್ಸೆಯನ್ನು ಬಿಜೆಪಿ ವೈಭವೀಕರಿಸುತ್ತದೆ. ಮತ್ತೊಂದೆಡೆ ಭಾರತ ಪ್ರವಾಸದಲ್ಲಿರುವ ವಿದೇಶಿ ಗಣ್ಯರನ್ನು ಸಾಬರಮತಿ ಆಶ್ರಮಕ್ಕೆ ಕರೆದೊಯ್ಯುತ್ತದೆ ಎಂದು ಕುಟುಕಿದೆ.

- Advertisement -

ಬಿಜೆಪಿ, ಮಹಾತ್ಮ ಗಾಂಧಿಯನ್ನು ಜಾಗತಿಕವಾಗಿ ಭಾರತದ ಗುರುತು ಎಂದು ಪ್ರತಿಪಾದಿಸಿ ನಾಟಕವಾಡುತ್ತಿದೆ ಎಂದು ಅದು ಆರೋಪಿಸಿದೆ.

ಬಿಜೆಪಿಯವರು ನಾಥುರಾಮ್ ಗೋಡ್ಸೆಯ ಸಿದ್ಧಾಂತವನ್ನು ಬೆಂಬಲಿಸುತ್ತಾರೆ. ವಿದೇಶಿ ಅತಿಥಿಗಳು ಬಂದಾಗ ನೂಲು ನೇಯಲು ಅವರನ್ನು ಗಾಂಧಿಯ ಸಾಬರಮತಿ ಆಶ್ರಮಕ್ಕೆ ಕರೆದೊಯ್ಯುತ್ತಾರೆ ಎಂದು ಸಾಮ್ನಾದ ಸಂಪಾದಕೀಯದಲ್ಲಿ ವ್ಯಂಗ್ಯವಾಡಿದೆ.

- Advertisement -

ಗುಜರಾತಿನಲ್ಲಿ ಐಕ್ಯತೆಯ ಪ್ರತಿಮೆ ಇದ್ದರೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೇರಿದಂತೆ ವಿದೇಶಿ ಗಣ್ಯರನ್ನು ಮಹಾತ್ಮ ಗಾಂಧಿಯನ್ನು ಭಾರತದ ಗುರುತು ಎಂಬ ನೆಲೆಯಲ್ಲಿ ಸಾಬರಮತಿ ಆಶ್ರಮಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಸಾಮ್ನಾ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.



Join Whatsapp