ಸುಳ್ಯ | ಕೋಳಿ ಪದಾರ್ಥ ಖಾಲಿಯಾಗಿದ್ದಕ್ಕೆ ಜಗಳ: ಮಗನನ್ನು ಹೊಡೆದು ಕೊಂದ ತಂದೆ

Prasthutha|

ಸುಳ್ಯ: ತಂದೆಯೊಬ್ಬ ತನ್ನ ಮಗನನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ.

- Advertisement -


ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಎಂಬಲ್ಲಿ ಶಿವರಾಮ (32) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.


ನಿನ್ನೆ ರಾತ್ರಿ ಶಿವರಾಮ ಅವರು ಕೋಳಿಯನ್ನು ಮನೆಗೆ ತಂದು ಪದಾರ್ಥ ಮಾಡುವಂತೆ ಹೇಳಿ ಹೊರಗೆ ಹೋಗಿದ್ದ. ರಾತ್ರಿ ಮಗ ಶಿವರಾಮ ಮನೆಗೆ ಬಂದಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಈ ವೇಳೆ ಕೋಳಿ ಪದಾರ್ಥ ಖಾಲಿಯಾಯಿತು ಎಂಬ ಕಾರಣದಿಂದ ತಂದೆ ಶೀನ ಹಾಗೂ ಮಗನ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ತಾರಕಕ್ಕೇರಿದೆ. ಬಳಿಕ ಕೋಪಗೊಂಡ ತಂದೆ ಶೀನ ಅವರು ಮಗ ಶಿವರಾಮನ ತಲೆಗೆ ಬಡಿಗೆಯಿಂದ ಬಲವಾಗಿ ಹೊಡೆದರೆನ್ನಲಾಗಿದೆ.

- Advertisement -


ಏಟು ಬಲವಾಗಿ ಬಿದ್ದು ತಲೆಯ ಬುರುಡೆ ಒಡೆದಿದ್ದು, ಇದರಿಂದ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಗಿ ಹೇಳಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನ ಅವರನ್ನು ಬಂಧಿಸಿದ್ದಾರೆ. ಶಿವರಾಮನ ಮೃತ ದೇಹ ಕಡಬ ಆಸ್ಪತ್ರೆಯಲ್ಲಿ ಇಡಲಾಗಿದೆ.

Join Whatsapp