ದುಬೈ ಕಾರ್ಯಕ್ರಮದಿಂದ ‘ಝೀ ನ್ಯೂಸ್’ ಪತ್ರಕರ್ತ ಸುಧೀರ್ ಚೌಧರಿಗೆ ಗೇಟ್ ಪಾಸ್ : ಟ್ವೀಟ್ ಮೂಲಕ ಮಾಹಿತಿ ಹಂಚಿದ ರಾಜಕುಮಾರಿ

Prasthutha|

ದುಬೈ: ಝೀ ನ್ಯೂಸ್ ಮುಖ್ಯಸ್ಥ ಸುಧೀರ್ ಚೌಧರಿಯನ್ನು ನವೆಂಬರ್ 21ರ ಅಬುದಾಬಿ ಕಾಯಕ್ರಮದಿಂದ ಕೈಬಿಡಲಾಗಿದೆ ಎಂದು ಯುಎಇ ರಾಜಕುಮಾರಿ ಹೆಂದ್ ಬಿಂತ್ ಫೈಝಲ್ ಅಲ್ ಖಾಸಿಮ್ ತಿಳಿಸಿದ್ದಾರೆ.

- Advertisement -

ಈ ಹಿಂದೆ ಅಬುಧಾಬಿ ಚಾರ್ಟರ್ಡ್ ಅಕೌಂಟೆಂಟ್ಸ್ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಸುಧೀರ್ ಚೌಧರಿ ವಿರುದ್ಧ ಯುಎಇ ರಾಜಕುಮಾರಿ, ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿ ತೀವ್ರ ವಾಗ್ದಾಳಿ ನಡೆಸಿದ್ದರು.

ತನ್ನ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಹೆಂದ್ ಇಸ್ಲಾಮ್ ನ ಬಗ್ಗೆ ಅಸಹಿಷ್ಣುತೆ ಹೊಂದಿರುವ ವ್ಯಕ್ತಿಯನ್ನು ಯಾಕೆ ಯುಎಇ ಗೆ ಕರೆಯಿಸುತ್ತಿರುವಿರಿ ಎಂದು ಖಾರವಾಗಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಸುಧೀರ್ ಚೌಧರಿಯನ್ನು ಅಬುಧಾಬಿ ಚಾರ್ಟರ್ಡ್ ಅಕೌಂಟೆಂಟ್ ಒಕ್ಕೂಟ ತನ್ನ ಕಾರ್ಯಕ್ರಮದಿಂದ ಕೈಬಿಟ್ಟಿದೆ.

- Advertisement -

ಈ ಹಿಂದೆಯೂ ಕೂಡ ಸುಧೀರ್ ಚೌದರಿ, ಭಾರತದಲ್ಲಿ ಒಂದು ಸಮುದಾಯವನ್ನು ಗುರಿಯಾಗಿಸಿ ದ್ವೇಷವನ್ನು ಹರಡುತ್ತಿದ್ದರು ಎಂದು ಹೇಳಲಾಗಿದೆ. ಮಾತ್ರವಲ್ಲ ಝೀ ನ್ಯೂಸ್ ನಲ್ಲಿ ಪ್ರಸಾರವಾದ ಜಿಹಾದ್ ಚಾರ್ಟ್ ಎಂಬ ಸಂಚಿಕೆಗೆ ಸಂಬಂಧಿಸಿದಂತೆ ಚೌಧರಿ ವಿರುದ್ಧ ಎಫ್.ಐ.ಆರ್ ದಾಖಲಾಗಿತ್ತು.

Join Whatsapp