ಸುಡಾನ್ ನಲ್ಲಿ ಕ್ಷಿಪ್ರ ಕ್ರಾಂತಿ | ಪ್ರಧಾನಿ ಬಂಧನದ ಬಳಿಕ ತುರ್ತು ಪರಿಸ್ಥಿತಿ ಹೇರಿದ ಸೇನಾ ಪ್ರಾಧಿಕಾರ

Prasthutha|

ಖರ್ತೂಮ್: ಸುಡಾನ್ ನಲ್ಲಿ ಪ್ರಸಕ್ತ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿದ್ದು, ಕ್ಷಿಪ್ರ ಸೇನಾ ಕ್ರಾಂತಿ ನಡೆದಿದೆ. ಮಾತ್ರವಲ್ಲ ಹಂಗಾಮಿ ಪ್ರಧಾನ ಮಂತ್ರಿಯನ್ನು ಬಂಧಿಸಿದ ಕೆಲವೇ ಗಂಟೆಗಳ ಬಳಿಕ ಜನರಲ್ ಸೋಮವಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ.

- Advertisement -

ಪ್ರಸ್ತುತ ಸುಡಾನ್ ನಲ್ಲಿ ಅಲ್ಲಲ್ಲಿ ಹಿಂಸಾಚಾರ ತಲೆದೋರಿದ್ದು, ದಂಗೆಯಿಂದಾಗಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.
ದೂರದರ್ಶನದ ಭಾಷಣದಲ್ಲಿ ಈ ಕುರಿತು ಮಾತನಾಡಿದ ಜನರಲ್ ಅಬ್ದೆಲ್ – ಫತ್ತಾಹ್ ಬುರ್ಹಾನ್ ಅವರು, ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ನೇತೃತ್ವದ ಆಡಳಿತಾರೂಢ ಸರ್ಕಾರವನ್ನು ವಿಸರ್ಜಿಸುವುದಾಗಿ ಘೋಷಿಸಿದರು.

ರಾಜಕೀಯ ಬಣಗಳ ನಡುವಿನ ಜಗಳದಿಂದಾಗಿ ಅನಿವಾರ್ಯದಿಂದಾಗಿ ಸೇನೆ ಮಧ್ಯಪ್ರವೇಶಿಸಲು ಪ್ರೇರೇಪಿಸಿದವು ಎಂದು ಜನರಲ್ ತಿಳಿಸಿದ್ದಾರೆ. ದೇಶದ ಪ್ರಜಾಪ್ರಭುತ್ವದ ಪರಿವರ್ತನೆಯನ್ನು ಪೂರ್ಣಗೊಳಿಸಲು ಈ ವೇಳೆ ಅವರು ಪ್ರತಿಜ್ಞೆ ಮಾಡಿದರು.

- Advertisement -

ವ್ಯಾಪಕ ಹಿಂಸಾಚಾರ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಅಶ್ರುವಾಯು ಬಳಸಿ ಜನರನ್ನು ಚದುರಿಸಲು ಪ್ರಯತ್ನಿಸಿದ್ದರು.
ಘಟನೆಯಿಂದಾಗಿ ಕನಿಷ್ಠ 12 ಮಂದಿ ಪ್ರತಿಭಟನಾಕಾರರು ಗಾಯಗೊಂಡರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Join Whatsapp