ಜೆಡಿಎಸ್’ನ ಪಂಚರತ್ನ ಯಾತ್ರೆಗೆ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳ ಸಾಥ್

Prasthutha|

ಮಂಗಳೂರು: ಕರ್ನಾಟಕ ರಾ‌ಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕನಸಿನ ಪಂಚರತ್ನ ಯಾತ್ರೆಯ ಪ್ರಚಾರ ವಾಹನವು ಇಂದು ಮಂಗಳೂರು ದಕ್ಷಿಣದ ಅಭ್ಯರ್ಥಿ ಡಾ. ಸುಮತಿ ಹೆಗ್ಡೆಯವರ ನೇತೃತ್ವದಲ್ಲಿ ಇಂದು ಮಂಗಳೂರಿನ ಪ್ರತಿಷ್ಠಿತ ಶ್ರೀದೇವಿ ಕಾಲೇಜು ತಲುಪಿತು.

- Advertisement -

ದ.ಕ.ಜಿಲ್ಲಾ ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಿಲಾಲ್ ಇವರ ನೇತೃತ್ವದಲ್ಲಿ ಶ್ರೀದೇವಿ ಕಾಲೇಜಿನ ವಿದ್ಯಾರ್ಥಿಗಳು ಪಂಚರತ್ನ ಯೋಜನೆ ವಾಹನವನ್ನು ಬರಮಾಡಿಕೊಂಡರು.

ಈ ಸಂದರ್ಭ  ಶ್ರೀದೇವಿ ಕಾಲೇಜಿನ ಸುಮಾರು 100ಕ್ಕಿಂತಲೂ ಹೆಚ್ಚು  ವಿದ್ಯಾರ್ಥಿಗಳು ಸಾಥ್ ನೀಡಿದರು.

Join Whatsapp