ವಿದ್ಯಾರ್ಥಿ ನಾಯಕ ಅತಿಖುರ್ರಹ್ಮಾನ್’ಗೆ ಯುಎಪಿಎ ಪ್ರಕರಣದಲ್ಲಿ ಜಾಮೀನು

Prasthutha|

ನವದೆಹಲಿ: ವಿದ್ಯಾರ್ಥಿ ನಾಯಕ ಅತಿಖುರ್ ರಹಮಾನ್‌’ಗೆ ಯುಎಪಿಎ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲಾಗಿದೆ.  ಯುಎಪಿಎ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಅತಿಖುರ್ ರಹಮಾನ್‌’ಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾರಿ ನಿರ್ದೇಶನಾಲಯ ಕೇಸ್‌’ನಲ್ಲಿ ಸಿಲುಕಿರುವ  ಅತಿಖುರ್ ರಹಮಾನ್ ಅವರು ಇ.ಡಿ ಪ್ರಕರಣದಲ್ಲಿ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.

- Advertisement -

2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್‌’ನಲ್ಲಿ ನಡೆದ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಪ್ರತಿಭಟಿಸಲು ತೆರಳುತ್ತಿದ್ದ ವಿದ್ಯಾರ್ಥಿ ಮುಖಂಡ ಅತಿಖುರ್ ರಹಮಾನ್, ಪತ್ರಕರ್ತ ಸಿದ್ದೀಕ್ ಕಾಪ್ಪನ್ ಮತ್ತು ಇತರೆ ಇಬ್ಬರ ಜೊತೆ ಉತ್ತರ ಪ್ರದೇಶ ಪೊಲೀಸರಿಂದ  ಬಂಧನಕ್ಕೊಳಪಟ್ಟಿದ್ದರು.

2020ರ ಅಕ್ಟೋಬರ್ 5ರಂದು ಬಂಧನಕ್ಕೊಳಪಟ್ಟಿದ್ದ ಅತಿಖುರ್ ರಹಮಾನ್ ಸದ್ಯ ಉತ್ತರ ಪ್ರದೇಶದ ಮಥುರಾ ಜೈಲಿನಲ್ಲಿ ಇದ್ದಾರೆ.

Join Whatsapp