ವಂದೇ ಭಾರತ್  ಎಕ್ಸ್’ಪ್ರೆಸ್’ಗೆ ಕಲ್ಲು ತೂರಾಟ; ಕಿಟಕಿ ಗಾಜುಗಳು ಧ್ವಂಸ

Prasthutha|

ಕೊಲ್ಕತ್ತಾ: ಹೌರಾದಿಂದ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲಿಗೆ ಕೆಲವು ಸಮಾಜಘಾತುಕರು ಕಲ್ಲು ತೂರಾಟ ನಡೆಸಿದ ಪರಿಣಾಮ ರೈಲಿನ ಕಿಟಕಿ ಗಾಜುಗಳು ಹುಡಿಯಾದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದ ಕುಮಾರ್ ಗಂಜ್’ನಲ್ಲಿ ನಡೆದಿದೆ.

- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲ್ಪೈಗುರಿ ಜಂಕ್ಷನ್ ಗೆ ಭಾರತದ 7 ನೇ ವಂದೇ ಭಾರತ್ ಎಕ್ಸ್’ಪ್ರೆಸ್  ಹಸಿರು ನಿಶಾನೆ ತೋರಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿದೆ.

ದಕ್ಷಿಣ ಬಂಗಾಳದಿಂದ ಉತ್ತರ ಬಂಗಾಳಕ್ಕೆ ಸಂಪರ್ಕ ಕಲ್ಪಿಸುವ ಎಕ್ಸ್’ಪ್ರೆಸ್  ರೈಲನ್ನು ಡಿಸೆಂಬರ್ 30, 2022 ರಂದು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಹೌರಾದಿಂದ ಔಪಚಾರಿಕವಾಗಿ ಚಾಲನೆ ನೀಡಲಾಗಿತ್ತು.

- Advertisement -

ವಂದೇ ಭಾರತ್  ಎಕ್ಸ್’ಪ್ರೆಸ್ 7.45 ನಿಮಿಷಗಳಲ್ಲಿ 564 ಕಿಲೋ ಮೀಟರ್​ ದೂರ ಕ್ರಮಿಸುತ್ತದೆ. ಈ ಮಾರ್ಗದಲ್ಲಿನ ಇತರ ರೈಲುಗಳಿಗೆ ಹೋಲಿಸಿದರೆ ಇದು ಮೂರು ಗಂಟೆಗಳ ಪ್ರಯಾಣದ ಸಮಯವನ್ನು ಕಡಿಮೆ ಇದೆ. ಮೂರು ಕಡೆ ಮಾತ್ರ ಇದು ನಿಲ್ಲಲಿದೆ. ದೇಶಾದ್ಯಂತ ಆರಂಭಿಸಲಾಗುತ್ತಿರುವ ವಂದೇ ಭಾರತ್​ ರೈಲಿನ ಮೇಲೆ ಕಿಡಿಗೇಡಿ ಕೃತ್ಯ ನಡೆಯುತ್ತಲೇ ಇವೆ.

ಕಲ್ಲು ತೂರಾಟದಿಂದ 2 ಬೋಗಿಯ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿಯಾಗಿದೆ. ಕಿಟಿಕಿಯ ಗಾಜು ಒಡೆದು ಹೋಗಿದೆ. ಯಾರಿಗೂ ಗಾಯಗಳಾಗಿಲ್ಲ. ರೈಲ್ವೆ ಸಂರಕ್ಷಣಾ ಪಡೆ ಈ ಕುರಿತು ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಕಾಯ್ದೆಯ ಸೆಕ್ಷನ್ 154 ರ ಅಡಿಯಲ್ಲಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪರಾಧ ಸಾಬೀತಾದರೆ ವ್ಯಕ್ತಿಯು 1 ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡಕ್ಕೂ ಒಳಪಡಬಹುದಾಗಿದೆ.



Join Whatsapp