ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಿಂದ ದಿಟ್ಟ ನಿರ್ಧಾರ : ‘ಪೀಸ್ ಪಾರ್ಕ್’ ಗೆ ಸ್ಟ್ಯಾನ್ ಸ್ವಾಮಿ ಹೆಸರು

Prasthutha|

►ಸಂಘಪರಿವಾರ ಸಂಘಟನೆಗಳಿಂದ ಪ್ರತಿಭಟನೆಯ ಬೆದರಿಕೆ

- Advertisement -

ಮಂಗಳೂರಿನ ಪ್ರತಿಷ್ಟಿತ ಸೈಂಟ್ ಅಲೋಶಿಯಸ್ ಕಾಲೇಜಿನ ‘ಪೀಸ್ ಪಾರ್ಕ್’ಗೆ ಸಾಮಾಜಿಕ ಹೋರಾಟಗಾರ ಸ್ಟ್ಯಾನ್ ಸ್ವಾಮಿಯ ಹೆಸರನ್ನು ಇಡುವ ದಿಟ್ಟ ನಿರ್ಧಾರ ತಳೆದಿದೆ. ಮೋದಿ ಸರ್ಕಾರದ ಷಡ್ಯಂತ್ರಗಳಿಗೆ ಒಳಪಟ್ಟು ಸ್ಟ್ಯಾನ್ ಸ್ವಾಮಿ ವರ್ಷಗಳ ಕಾಲ ಜೈಲಿನಲ್ಲಿದ್ದು ಅಲ್ಲೇ ಕೊನೆಯುಸಿರೆಳೆದಿದ್ದರು. ಅವರ ಮೇಲೆ ಭೀಮಾ ಕೋರೆಗಾಂವ್ ಗಲಭೆ ಪ್ರಕರಣವನ್ನು ಹೊರಿಸಲಾಗಿತ್ತು.

ಆದರೆ ಕಾಲೇಜು ಆಡಳಿತ ಮಂಡಳಿಯ ಈ ತೀರ್ಮಾನಕ್ಕೆ ಕೋಮುವಾದಿ ಸಂಘಟನೆ ಹಿಂದೂ ಜಾಗರಣಾ ವೇದಿಕೆ ಎಂದಿನಂತೆ ಶಾಂತಿ ಕದಡುವ ಹೇಳಿಕೆ ನೀಡಿ ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಸಂಘಪರಿವಾರದ ಇತರೆ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆ ಎಬಿವಿಪಿ ಜಿಲ್ಲಾಧಿಕಾರಿಗಳಿಗೆ ಈ ಕ್ರುಇತು ಮನವಿ ಸಲ್ಲಿಸಿದೆ.

Join Whatsapp