ಪ್ರವೇಶ ಪತ್ರ ಪಡೆದು ವಾಪಸಾಗುವಾಗ ಹೃದಯಾಘಾತ: ಎಸ್‌ಎಸ್ಎಲ್‌ ಸಿ‌ ವಿದ್ಯಾರ್ಥಿನಿ ಸಾವು

Prasthutha|

ಯಾದಗಿರಿ: ಪ್ರವೇಶ ಪತ್ರ ಪಡೆದು ಮನೆಗೆ ವಾಪಸಾಗುವಾಗ ಬಸ್ ನಿಲ್ದಾಣದಲ್ಲಿ ಎಸ್‌ಎಸ್ಎಲ್‌ ಸಿ‌ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್‌ ಬಸ್​ ನಿಲ್ದಾಣದಲ್ಲಿ ನಡೆದಿದೆ.

- Advertisement -

ಜುಲೈ 19 ರಂದು ಪರೀಕ್ಷೆ ಬರೆಯಬೇಕಿದ್ದ ಪುಟಪಾಕ ಗ್ರಾಮದ ನಿಶಿತಾ ಫಾತಿಮಾ (16) ಮೃತಪಟ್ಟ ಬಾಲಕಿ. ನಿಶಿತಾ ಫಾತಿಮಾ ಇಲ್ಲಿನ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ. ಗುರುವಾರ ಗ್ರಾಮಕ್ಕೆ ವಾಪಸ್​ ಹೋಗಲು ಬಸ್ ನಿಲ್ದಾಣದಲ್ಲಿ ಕುಳಿತಿದ್ದಾಗ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಳೆ.

ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಮೃತಪಟ್ಟಿದ್ದಾರೆಂದು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Join Whatsapp