ಮಳೆಯಿಂದಾಗುವ ಹಾನಿಯಿಂದ ರಕ್ಷಣೆ ಹೊಂದಲು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ದ‌.ಕ. ಖಾಝಿ ಕರೆ

Prasthutha|

ಮಂಗಳೂರು: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಿಂದಾದ ದುರಂತ‌ ಮತ್ತು ಭಾರೀ ಮಳೆಯಿಂದ ಆಗುತ್ತಿರುವ ಅಪಾರ ಹಾನಿ ಸಂಬಂಧವಾಗಿ ಎಲ್ಲಾ ಮಸೀದಿಗಳಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಲು ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

- Advertisement -

ಮಳೆಯಿಂದ ಆಗುವ ಹಾನಿಯಿಂದ ರಕ್ಷಣೆ ಹೊಂದಲು ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಬೇಕು ಎಂದು ತಿಳಿಸಿದ ಅವರು, ನಾಡಿನ ಹಲವೆಡೆ ರಸ್ತೆ ಜನಜೀವನ ಅಸ್ತವ್ಯಸ್ಥಗೊಂಡಿವೆ. ಹಾಗಾಗಿ ಸಂಕಷ್ಟದಲ್ಲಿರುವವರಿಗೆ ಎಲ್ಲರೂ ಸಹಕರಿಸಬೇಕು, ನೆರವಿಗೆ ಧಾವಿಸಬೇಕು ಎಂದೂ ಜನರಲ್ಲಿ ಮನವಿ ಮಾಡಿದ್ದಾರೆ.



Join Whatsapp