ಮುಕ್ತಾಯಗೊಂಡ ಬಜೆಟ್ ಅಧಿವೇಶನ, ಕಾರ್ಯಕಲಾಪಗಳ ವಿವರ ನೀಡಿದ ಸ್ಪೀಕರ್ ಯುಟಿ ಖಾದರ್

Prasthutha|

ಬೆಂಗಳೂರು: ಜುಲೈ 3 ರಂದು ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾದ 16ನೇ ವಿಧಾನಸಭೆಯ ಉಭಯ ಸದನಗಳ ಜಂಟಿ ಅಧಿವೇಶನ ಇಂದು ಮುಕ್ತಾಯಗೊಂಡಿತು.

- Advertisement -

ವಾಡಿಕೆಯ ಪ್ರಕಾರ, ವಿಧಾನ ಸಭೆಯಲ್ಲಿ ನಡೆದ ಕಾರ್ಯಕಲಾಪಗಳ ವರದಿಯನ್ನು ಸಭಾಧ್ಯಕ್ಷ ಯುಟಿ ಖಾದರ್ ಮಾಧ್ಯಮಗಳಿಗೆ ನೀಡಿದರು.

15 ದಿನಗಳ ಕಾಲ ನಡೆದ ವಿಧಾನಸಭಾ ಅಧಿವೇಶನದಲ್ಲಿ ಒಟ್ಟು 78 ಗಂಟೆ 25 ನಿಮಿಷ ಕಾರ್ಯಕಲಾಪಗಳು ನಡೆದವು ಎಂದು ಖಾದರ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 7ರಂದು ಮಂಡಿಸಿದ ಬಜೆಟ್-2023 ಅನ್ನು ಜುಲೈ 20 ರಂದು ಅಂಗೀಕರಿಸಲಾಯಿತು ಎಂದು ಸಭಾಪತಿ ಹೇಳಿದರು.

- Advertisement -

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ 34 ಸದಸ್ಯರು 12 ಗಂಟೆ ಮತ್ತು 39 ನಿಮಿಷಗಳ ಕಾಲ ಭಾಗವಹಿಸಿರುತ್ತಾರೆ ಎಂದ ಸ್ಪೀಕರ್ ಅಧಿವೇಶನದಲ್ಲಿ ಒಟ್ಟು 1049 ಪ್ರಶ್ನೆಗಳನ್ನು ಅಂಗೀಕರಿಸಲಾಯಿತು ಎಂದು ಹೇಳಿದರು.

Join Whatsapp