ಮದ್ಯಪಾನಕ್ಕೆ ಹಣ ನೀಡದ ತಂದೆಯನ್ನೇ ಕೊಂದ ಮಗ

Prasthutha|

ಬೆಂಗಳೂರು: ಮದ್ಯಪಾನಕ್ಕೆ ಹಣ ನೀಡದ್ದಕ್ಕೆ ಆಕ್ರೋಶಗೊಂಡ ಮಗ ಸ್ವಂತ  ತಂದೆಯನ್ನೇ ಇಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ  ಗೋವಿಂದರಾಜನಗರದ ಮಾರೇನಹಳ್ಳಿ ಪಿ. ಎಸ್ ಲೇಔಟ್’​ನಲ್ಲಿ ನಡೆದಿದೆ.

- Advertisement -

ಸೆಕ್ಯೂರಿಟಿಗಾರ್ಡ್ ಬಸವರಾಜು(60) ಕೊಲೆಯಾದವರು, ಕೃತ್ಯ ನಡೆಸಿದ ಅವರ ಪುತ್ರ ಆಟೋ ಚಾಲಕನಾಗಿದ್ದ ನೀಲಧರ್​ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಾರೇನಹಳ್ಳಿ ಪಿ. ಎಸ್ ಲೇಔಟ್​ ನಲ್ಲಿ ಮಗ ಹಾಗೂ ತಂದೆ ಇಬ್ಬರು ವಾಸವಾಗಿದ್ದರು ಮದ್ಯದ ಚಟ ಅಂಟಿಸಿಕೊಂಡಿದ್ದ ನೀಲಧರ್ ಸರಿಯಾಗಿ ಕೆಲಸಕ್ಕೆ ಹೋಗದೇ ತಂದೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದ. ಕೆಲ ದಿನಗಳ ಹಿಂದೆ ಮದ್ಯಪಾನಕ್ಕೆ ಹಣ ನೀಡುವಂತೆ ಪೀಡಿಸಿದ್ದು ಕೊಡದಿದ್ದರಿಂದ ಶೆಡ್​ ನಲ್ಲಿ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನು ನೀಲಧರ್  ಕೊಲೆ ಮಾಡಿದ್ದಾನೆ. ಕೊಲೆಯಾಗಿ 15 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

- Advertisement -

ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಗೋವಿಂದರಾಜ ನಗರ ಪೊಲೀಸರಿಗೆ ಮಗನಿಂದಲೇ ತಂದೆ ಕೊಲೆಯಾಗಿರುವುದು ಪತ್ತೆಯಾಗಿದ್ದು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದರು.

Join Whatsapp