ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೆ ತಾಯಿಯ ಮೃತದೇಹವನ್ನು ಮನೆಯಲ್ಲೇ  ಬಚ್ಚಿಟ್ಟ ಮಗ

Prasthutha|

ಲಕ್ನೋ: ಅಂತ್ಯಕ್ರಿಯೆ ನಡೆಸಲು ಹಣವಿಲ್ಲದ ಕಾರಣ ಮಗನೊಬ್ಬ ತನ್ನ ತಾಯಿಯ ಮೃತದೇಹವನ್ನು 5 ದಿನಗಳ ಕಾಲ ಮನೆಯಲ್ಲೇ  ಬಚ್ಚಿಟ್ಟ ಘಟನೆ ಉತ್ತರ ಪ್ರದೇಶದ ಗೋರಖ್ ಪುರ ಜಿಲ್ಲೆಯ ಗುಲ್ರಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ನಿವೃತ್ತ ಶಿಕ್ಷಕಿಯಾಗಿದ್ದ ಶಾಂತಿ ದೇವಿ (82) ಶಿವಪುರ-ಶಹಬಾಜ್ ಗಂಜ್ ನಲ್ಲಿರುವ ತಮ್ಮ ತಾಯಿ ಮನೆಯಲ್ಲಿ  ಮಗ ನಿಖಿಲ್ ಮಿಶ್ರಾನೊಂದಿಗೆ ವಾಸಿಸುತ್ತಿದ್ದರು. ಕುಡುಕ ಹಾಗೂ ಮಾನಸಿಕ ಅಸ್ವಸ್ಥನಾಗಿದ್ದ ನಿಖಿಲ್ ಆಗಾಗ್ಗೆ ತನ್ನ ತಾಯಿಯೊಂದಿಗೆ ಹಣಕ್ಕಾಗಿ ಪೀಡಿಸುತ್ತಿದ್ದ.

ತನ್ನ ತಾಯಿ ನಿಧನಳಾದಾಗ ಅತ್ತ ಹಣವೂ ಇಲ್ಲದೆ, ಮುಂದೆ ಏನು ಮಾಡುವುದೆಂದು ತಿಳಿಯದ ಆತ ಮೃತ ತಾಯಿಯ ಜೊತೆಯೇ ನಾಲ್ಕೈದು ದಿನ ಕಳೆದಿದ್ದಾನೆ. ಮಂಗಳವಾರ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

- Advertisement -

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Join Whatsapp